ಅವನೇನು ಮಾಡಿಲ್ಲ. ಸುಮ್ಮನೆ ಸಿಕ್ಕಿಸಿ ಹಾಕ್ಸಿದ್ದಾರೆ - ಆರಾಫತ್ ಅಲಿ ತಂದೆ ಹೇಳಿಕೆ.!!

 

ತೀರ್ಥಹಳ್ಳಿ : ಮಗ ಅರಾಫತ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಅವನು ದುಬೈ ಗೆ ಹೋಗಿ ಮೂರುವರೆ ವರ್ಷ ಆಯ್ತು.. ಅಲ್ಲಿವರಗೂ ಏನು ಇರಲಿಲ್ಲ.. ಅವನ ಮೇಲೆ ಯಾವ ಕೇಸ್ ಹಾಕಿದ್ದಾರೋ ಗೊತ್ತಿಲ್ಲ. ನಮಗೆ ನ್ಯಾಯ ಬೇಕು. ಅವನೇನು ಮಾಡಿಲ್ಲ.. ಸುಮ್ಮನೆ ಸಿಕ್ಕಿಸಿ ಹಾಕ್ಸಿದ್ದಾರೆ ಎಂದು ಅರಾಫತ್ ಅಲಿ ತಂದೆ ಅಹಮದ್ ಬಾವ ಹೇಳಿಕೆ ನೀಡಿದ್ದಾರೆ.


ದೆಹಲಿಯಲ್ಲಿ ಶಂಕಿತ ಉಗ್ರ ಅರಾಫತ್ ಅಲಿ ಬಂಧನ ವಿಚಾರವಾಗಿ ತೀರ್ಥಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ತೀರ್ಥಹಳ್ಳಿಯ ಸಹ್ಯಾದ್ರಿ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೊಮಾ ಮಾಡಿದ್ದ.. ಫೇಲ್ ಆಗಿದ್ದ. ಬೆಂಗಳೂರಿಗೇನು ಹೋಗಿಲ್ಲ. ಬಳಿಕ ದುಬೈಗೆ ಹೋಗಿದ್ದ.. ಅಲ್ಲಿ ಫರ್ಪ್ಯೂಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕೊನೆವರೆಗೂ ಅಲ್ಲೆ ಇದ್ದ.ಆಗಾಗ ಹಣ ಕೂಡ ಕಳಿಸುತ್ತಿದ್ದ. ನಮ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎಂದು ಹೇಳಿದ್ದಾರೆ.

ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ ಪೊಲೀಸರು ಮನೆಗೆ ಬಂದಿದ್ರು‌. ಅರಾಫತ್ ಬಗ್ಗೆ ಕೇಳಿದ್ರು. ಆಗ ದುಬೈಗೆ ಹೋಗಿ 10 ತಿಂಗಳಾಗಿದೆ ಎಂದು ಹೇಳಿದ್ದೆ.. ಆತನೇ ಬರೆಯೋಕೆ ಹೇಳಿದ್ದಾನೆ. ಹಾಗಾಗೀ ಕೇಸ್ ಆಗಿದೆ ಎಂದು ಪೊಲೀಸರು ಹೇಳಿದ್ರು. ಮಗನ 2 ನಂಬರ್ ಕೂಡ ಪೊಲೀಸರಿಗೆ ಕೊಟ್ಟಿದ್ದೆ.ಮಂಗಳೂರು ಕೇಸ್ ಲ್ಲಿ ಸಿಕ್ಕವರು ಆತನ ಸ್ನೇಹಿತರು. ಹಾಗಾಗೀ ಕೇಸ್ ಹಾಕಿದ್ದಾರೆ‌ ಎಂದರು.

2019 ರಲ್ಲಿ ಹೋಗಿದ್ದು. ಮಗನನ್ನು ನೋಡಿ ಮೂರುವರೆ ವರ್ಷ ಆಯ್ತು. ಆಗಾಗ ಕಾಲ್ ಮಾಡಿ ವಿಚಾರಿಸುತ್ತಿದ್ದ. ಕಡೆಯದಾಗಿ ಒಂದು ತಿಂಗಳ ಹಿಂದೆ ಕಾಲ್ ಮಾಡಿದ್ದ. ಚೆನ್ನಾಗಿದ್ದೇನೆ. ಕೆಲಸ ಮಾಡ್ತಿದ್ದೇನೆ ಎಂದು ಹೇಳಿದ್ದ. ಮನೆಗೆ ಹಣ ಕಳಿಸೋದನ್ನ ಒಂದು ವರ್ಷದ ಹಿಂದೆಯೇ ನಿಲ್ಲಿಸಿದ್ದಾನೆ. ನಾನು ಯಾವ ಕೇಸಲ್ಲೂ ಇಲ್ಲ.. ನನಗೇನು ಗೊತ್ತಿಲ್ಲ ಎಂದಷ್ಟೆ ಹೇಳುತ್ತಿದ್ದ. ಇಲ್ಲಿ ಏನಾಗಿದೆ ಎಂದು ಗೊತ್ತಿಲ್ಲ. ನಮಗೆ ನ್ಯಾಯ ಬೇಕು. ಅವನು ತಪ್ಪು ಮಾಡಿದ್ರೇ ಶಿಕ್ಷೆ ಆಗಲಿ. ಅವನಾದ್ರೂ ಅಷ್ಟೆ. ನಾನಾದ್ರೂ ಅಷ್ಟೇ ಎಂದ ಅರಾಫತ್ ಅಲಿ ತಂದೆ ಅಹಮದ್ ಬಾವ ಹೇಳಿಕೆ ನೀಡಿದ್ದಾರೆ..

ಮಾಹಿತಿ :ಅಕ್ಷಯ ಶಿವಮೊಗ್ಗ ಸುದ್ದಿ.

Post a Comment

Previous Post Next Post