ಮಾರುತಿಪುರ :ಕಾರು ಹಾಗೂ ಗೂಡ್ಸ್ ಲಾರಿ ನಡುವೆ ಬೀಕರ ಅಪಘಾತ ಕಾರು ಚಾಲಕ ಸ್ಥಳದಲ್ಲೇ ಸಾವು!!

 

ಹೊಸನಗರ: ಮಾರುತಿಪುರ ಸಮೀಪ ಹೊಸಕೆಸರೆ-  ದರೋಡೆಕಾನ್  ಹತ್ತಿರ ಸರಕು ತುಂಬಿದ ಲಾರಿ  ಹಾಗೂ ಆಲ್ಟೊ ಕಾರಿನ ಮದ್ಯೆ ನಿನ್ನೆ ರಾತ್ರಿ ಬೀಕರ ಅಪಘಾತವಾಗಿದ್ದು 
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ  ನಜ್ಜು - ಗುಜ್ಜಾಗಿದ್ದು ಚಾಲಕ ವಿನಯ ಗೌಡ( 26) ಸ್ಥಳದಲ್ಲೇ ಸಾವಿನಪ್ಪಿದ್ದಾರೆ

ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಮೃತ ಚಾಲಕ ಬಾನಿಗಾ ದಿಂದ ಸಾಗರಕ್ಕೆ ತೆರಳುವಾಗ ಈ ದಾರುಣ ಘಟನೆ ಸಂಭವಿಸಿದ್ದು ವಿನಯ್ ಗೌಡ (26) ಬಾಣಿಗದಿಂದ ಊಟವನ್ನ ಮುಗಿಸಿಕೊಂಡು ಸಾಗರಕ್ಕೆ ತೆರಳುತ್ತಿದ್ದಾಗ ರಾತ್ರಿ 10-30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಚಾಲಕ ಶ್ರೀ ರಾಮ್ ಫೈನಾನ್ಸ್ ಉದ್ಯೋಗಿ ಎಂದು ತಿಳಿದುಬಂದಿದ್ದು.

ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ..

Post a Comment

Previous Post Next Post