ಸಾಗರ :ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳವನ್ನು ಯಶಸ್ವಿಯಾಗಿ ಸ್ಪರ್ಶ ಮಾಡಿದ ಹಿನ್ನೆಲೆ ಸಾಗರದ 8ನೇ ವಾರ್ಡ್ ಶ್ರೀನಗರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ್ದರು
ಇಲ್ಲಿನ ಭೂತಪ್ಪನ ಕಟ್ಟೆ ಮುಂಭಾಗದಲ್ಲಿ ಶ್ರೀನಗರದ ನಾಗರಿಕರು ಚಂದ್ರಯಾನ - 3 ಯಶಸ್ವಿಯಾಗುತ್ತಿದ್ದಂತೆ ಭಾರತ್ ಮಾತಾ ಕಿ ಜೈ, ಮೇರಾ ಭಾರತ್ ಮಹಾನ್ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು
ಈ ಸಂದರ್ಭದಲ್ಲಿ ದಯಾನಂದ ನಾಯಕ್ ಮಾತನಾಡಿ ಇಸ್ರೋ ವಿಜ್ಞಾನಿಗಳು ಇಡೀ ದೇಶದ ಪ್ರತಿಯೊಬ್ಬ ಪ್ರಜೆ ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ ಅವರ ಪರಿಶ್ರಮಕ್ಕೆ ಇಂದು ಯಶಸ್ಸು ದೊರಕಿದೆ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರಯಾನ ಅಂಗಳಕ್ಕೆ ಇಳಿದಿರುವುದು ಅಭಿಮಾನ ಹಾಗೂ ಹೆಮ್ಮೆಯ ಸಂಗತಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಮ್ಮೆ ಸಾಧನೆಯ ಶಿಖರ ಏರುವಂತಾಗಿದೆ ಚಂದ್ರನ ಬಗ್ಗೆ ಇನ್ನಷ್ಟು ಅಧ್ಯಯನ ಸಂಶೋಧನೆಗೆ ಭಾರತದ ಈ ಯಾನ ಮುನ್ನುಡಿ ಬರೆಯಲಿದೆ ಎಂದರು
ಈ ಸಂದರ್ಭದಲ್ಲಿ ದಿನೇಶ್, ಲೋಹಿತ್, ಸತೀಶ್,ರವೀಂದ್ರ,ಚೇತನ್, ಸುಬ್ರಮಣ್ಯ, ಕಿರಣ್, ಸೌರವ್,ದಿಗಂತ್, ಇನ್ನಿತರರು ಹಾಜರಿದ್ದರು
ಮಾಹಿತಿ : ಸೂರಜ್ ನಾಯರ್