ಹೊಸನಗರ :ಮಾರುತಿಪುರ ಬಡ ಯುವಕ ಚಿಕಿತ್ಸೆಗೆ ಸಹೃದಯಿಗಳ ನೆರವಿನ ನೀರಿಕ್ಷೆಯಲ್ಲಿ ಕುಟುಂಬ.!.


ಹೊಸನಗರ :ಬದುಕಿನಲ್ಲಿ ಆಕಸ್ಮಿಕ ಘಟನೆಗಳು ಎಲ್ಲರ ಜೀವನದಲ್ಲಿ ಬರುತ್ತವೆ,ಕೆಲವು ಸಂತಸ ನೋವು ಗಳನ್ನ ತಂದರೆ ಇನ್ನೂ ಜೀವನವೆ ಕರಗಿ ಹೋಗೋ ನೋವು ನೀಡಿ ಬಿಡುತ್ತೆ ಅದೇ ರೀತಿಯಲ್ಲಿ ಅನೀರಿಕ್ಷಿತ ನೋವು ಮಾರುತಿಪುರದ ಯುವಕನ ಪಾಲಿಗೆ ಬಂದಿದ್ದು.. ಸಾವಿನ ದವಡೆಯಲ್ಲಿ ಇದ್ದಾನೆ...

ಯುವಕನ ಹೆಸರು  ಸುರೇಂದ್ರ ವಯಸ್ಸು (24 )ಹೊಸನಗರ ತಾಲ್ಲೂಕು ಮಾರುತೀಪುರ ನಿವಾಸಿಯಾಗಿದ್ದು ಕುಟುಂಬ ನಿರ್ವಹಣೆಗಾಗಿ ಪೆಯಿಂಟಿಂಗ್ ( painting ) ಕೆಲಸ ಮಾಡುತ್ತ ಜೀವನ ನೆಡೆಸುತ್ತಿದ್ದು.ಕಡು ಬಡ ಕುಟುಂಬದ ಸಂಪೂರ್ಣ ಮನೆಯ  ಪೂರ್ಣ ಜವಬ್ದಾರಿಯನ್ನು ಹೊತ್ತಿರುತ್ತಾನೆ. ದಿನಾಂಕ 03-04-2023 ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಕೆಲಸಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಪಾದಚಾರಿಯೊಂದಿಗೆ ಆಕಸ್ಮಿಕವಾಗಿ ಅಪಘಾತಕ್ಕೀಡಾಗಿದ್ದು ತಲೆ ಭಾಗದಲ್ಲಿ ತೀವ್ರ ಪೆಟ್ಟಾಗಿದ್ದು ರಕ್ತಸ್ರಾವವಾಗಿದ್ದು,ವೈದ್ಯರು ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ಖಾಸಗಿ ಆಸ್ಪತ್ರೆ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತೀರ್ವ ನಿಗಾ ವಿಭಾಗದಲ್ಲಿ ದಾಖಲಾಗಿದ್ದು, ಸದ್ಯ ಕೋಮಾ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.ಚಿಕಿತ್ಸಾ ವೆಚ್ಚ (head operation) ಅಂದಾಜು 3-4 ಲಕ್ಷ ಹಣದ ಅವಶ್ಯಕತೆ ಇರುತ್ತದೆ..

.ಸದ್ಯದ ಪರಿಸ್ಥಿತಿಗೆ ಕುಟುಂಬಕ್ಕೆ ಇಷ್ಟೊಂದು ದೊಡ್ಡ ಮೊತ್ತ ಹಣವನ್ನ ಜೋಡಿಸಲು ಅಸಾಧ್ಯವಾಗಿದ್ದು, ಪರಿತಪಿಸುತ್ತಿದಾರೆ... ಹಾಗಾಗಿ ಆ ಕುಟುಂಬಕ್ಕೆ ಈಗ ನೆರವಿನ ಅವಶ್ಯಕತೆ ಇದ್ದು ಊರಿನ ಸ್ನೇಹಿತರು, ಗ್ರಾಮಸ್ಥರು ಸಹೃದಯಿಗಳು ಸಹಾಯ ಅವಶ್ಯಕತೆ ಇದೆ.. ನೆರವು ನೀಡುವವರು ಈ ಕೆಳಕಂಡ ಮಾಹಿತಿಯನ್ನ ಪಡೆಯಬಹುದು...

 ದಯವಿಟ್ಟು ತಮ್ಮ ಕೈಲಾದ ಸಹಾವನ್ನು ನೀಡಿ ಈ ಯುವಕನ ಜೀವಕ್ಕೆ ನೆರವಾಗಿ, ಜೀವ ಉಳಿಸುವ ಮಹತ್ ಕಾರ್ಯದಲ್ಲಿ ತಮ್ಮ ಅಳಿಲು ಸೇವೆ ಅಗತ್ಯವಾಗಿದೆ...ಈ

ದಾನಿಗಳು ಕೆಳಗಿನ ನಂಬರ್ ಗೆ ಹಣವನ್ನು ಪಾವತಿಸಿ.

ಪೋನ್ ಪೇ ನಂಬರ್: 

ಪ್ರದೀಪ್ - 9535831803

ಸಹಾಯ ಹಸ್ತದ ನಿರೀಕ್ಷೆಯಲ್ಲಿ

ಕಾರ್ತೀಕ್ ಹಾಗೂ‌ ಮಹೇಶ್ ಬಾಣಿಗ ಹಾಗೂ ಸ್ನೇಹಿತರ ಬಳಗ

Post a Comment

Previous Post Next Post