ಶಿವಮೊಗ್ಗ :ಸಾಗರ ಈಜು ಕಲಿಯಲು ಹೋಗಿ, ಕೆರೆಯಲ್ಲಿ ಮುಳುಗಿ ಯುವಕ ದಾರುಣ ಸಾವು!!

ಶಿವಮೊಗ್ಗ : ನಸುಕಿನ ಮಂಜು ಮುಸುಕಿದ ವಾತಾವರಣದಲ್ಲೇ ಮೂವರು ಹುಡುಗರು ಈಜು ಕಲಿಯಲೆಂದು ಯಾವುದೇ ಜೀವರಕ್ಷಕ ಸಾಧನ ಗಳಿಲ್ಲದೆ ಕೆರೆ ಇಳಿದಿದ್ದು, ಸಾಗರ ತಾಲೂಕು ಭೀಮನಕೋಣೆ ಹತ್ತಿರದ ಕೆರೆಯಲ್ಲಿ ಯುವಕ ಯಶವಂತ ನೀರಿನಲ್ಲಿ ಮುಳುಗಿ ದಾರುಣವಾಗಿ ಸ್ನೇಹಿತರ ಎದುರೇ ಸಾವನಪ್ಪಿದ್ದಾನೆ!!


ಸ್ನೇಹಿತರು ಕೆರೆಯಲ್ಲಿ ಈಜುತ್ತಿರುವದನ್ನು ನೋಡಿದ ಯಶವಂತ ತಾನು ಸಹ ಕೆರೆಗೆ ಹಾರಿದ್ದು ಈಜು ಬಾರದೆ ಯಶವಂತ ನೀರು ಪಾಲಾಗಿದ್ದಾನೆ!!ಸಾಗರ -ಹೊಸನಗರ ಮುಖ್ಯ ಹೆದ್ದಾರಿ ಪಕ್ಕದ ಸಾಗರ ಗ್ರಾಮಾಂತರ ವ್ಯಾಪ್ತಿಯ ಬೀಮನಕೋಣೆಯ ಕೆರೆಯಲ್ಲಿ ಈಜಲು ಹೋದ ಸಾಗರ ನಗರದ ರಾಮನಗರದ ಯುವಕನಾಗಿದ್ದು ಯಶವಂತ (21) ವರ್ಷ ಸಾಗರದ ಶಾಯಿ ಗಾರ್ಮೆಂಟ್ಸ್ ಉದ್ಯೋಗಿ ಎಂದು ಮಾಹಿತಿ ಲಭ್ಯವಾಗಿದೆ. ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು. ಸ್ಥಳದಲ್ಲಿ ಅಗ್ನಿಶಾಮಕ ಧಳ ಮತ್ತು ಗ್ರಾಮಾಂತರ ಪೋಲಿಸ್ ಅಧಿಕಾರಿಗಳು ಶವ ಪತ್ತೆಗಾಗಿ ಶೋಧನೆ ನೆಡಿಸಿ, ಯಶವಂತ ದೇಹವನ್ನು ಪತ್ತೆ ಮಾಡಿದ್ದು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...

Post a Comment

Previous Post Next Post