ಹೊಸವರ್ಷಾಚರಣೆ ಭಿನ್ನವಾಗಿ ಆಚರಣೆ ಮಾಡುವ ವೇಳೆ,ಗಾಳಿಯಲ್ಲಿ ಗುಂಡು ಹಾರಿಸಿ ಹೊಸ ವರ್ಷವನ್ನ ಬರಮಾಡಿಕೊಳ್ಳಲು ಗುಂಡು ಹಾರಿಸಿದ್ದಾರೆ ಅದು ಮಿಸ್ ಫೈರಿಂಗ್ ಆಗಿ ಆಚರಣೆಯಲ್ಲಿ ಭಾಗವಹಿಸಿದ್ದ, ಹೊಸನಗರ ತಾಲೂಕು ಮೂಲದ ವಿನಯ್ ಎಂಬಾತ ಮೇಲೆ ಅಚಾನಕ್ಕಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದ ಮಂಜುನಾಥ ಅವರ ಡಬಲ್ ಬ್ಯಾರೆಲ್ ಬಂದೂಕಿನ ಗುಂಡು ಯುವಕನ ಎದೆಗೆ ಹೊಡೆದಿದ್ದು.ಗಂಭೀರವಾಗಿ ಗಾಯ ಗೊಂಡಿದ್ದ ಯುವಕನನ್ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾತಿ ಮಾಡಿದ್ದರು.ಗುಂಡು ಯುವಕನಿಗೆ ತಗುಲಿದ್ದು ಕಂಡು ಮಿಸ್ ಫೈರ್ ಮಾಡಿದ ಮಂಜುನಾಥ್ ಓಲೇಕಾರ್ ಅವರು ಸಂಪೂರ್ಣವಾಗಿ ಆಘಾತಕ್ಕೆ ಒಳಗಾಗಿ ಹೃದಯಘಾತವಾಗಿದ್ದು ತಕ್ಷಣವೇ ಮೆಗ್ಗನ್ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಾರ್ಗಮದ್ಯೆಯೇ ಮಂಜುನಾಥ್ ಸಾವಿನಪ್ಪಿದ್ದಾರೆ..
ಗುಂಡು ಹಾರಿಸಿದ ಮಂಜುನಾಥ್ ಸಾವಿನ ಬೆನ್ನಲ್ಲೇ ಮಿಸ್ ಫೈರಿಂಗ್ ನಲ್ಲಿ ತೀವ್ರ ಗಾಯಗೊಂಡಿದ್ದ ಯುವಕ ವಿನಯ್ ಎನ್ನುವವರು ಸಹ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ವಿನಯ್ (35) ಪಿಎಚ್'ಡಿ ವಿದ್ಯಾರ್ಥಿಯಾಗಿದ್ದು, ಮೂಲತಃ ಹೊಸನಗರದ ಹುಡುಗ ಎನ್ನಲಾಗಿದೆ.
ಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ...
Tags:
ಶಿವಮೊಗ್ಗ