ಸಾಗರ:ಸಣ್ಣಮನೆ ಬೀಕರ ಲಾರಿ ಅಪಘಾತ, ಚಾಲಕ ಆಸ್ಪತ್ರೆಯಲ್ಲಿ ಸಾವು!!!

 ಸಾಗರ : ಸಾಗರ ಸಣ್ಣಮನೆ ಹತ್ತಿರ ನೆಡೆದ ಬೀಕರ ಲಾರಿ  ಅಪಘಾತಕ್ಕೆ ವಿದ್ಯಾರ್ಥಿನಿ ಪ್ರತಿಮಾ ಆಸ್ಪತ್ರೆಯಲ್ಲಿ ಕೊನೆ ಉಸಿರು ಚೆಲ್ಲಿದ್ದರು ಹಾಗೂ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯ ಗೊಂಡಿದ್ದರು. ಲಾರಿ ಚಾಲಕ ಕೃಷ್ಣ ಆಚಾರ್ ಅವರ ಸಹ ಜಿಲ್ಲಾಸ್ಪತ್ರೆಗೆ ದಾಖಲಾತಿ ಮಾಡಲಾಗಿತ್ತು ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರುರೆಳೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ..

ಜೋಗದ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ​ ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ಅವರಿಗೆ ತಕ್ಷಣವೇ ಚಿಕಿತ್ಸೆ ನೀಡಲಾಯ್ತಾದರೂ, ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ಪ್ರತಿಮ ಎಂಬ 18 ವರ್ಷದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು....

ಈ ಘಟನೆಯ ಬೆನ್ನಲ್ಲೆ ಸಾರ್ವಜನಿಕರು ಚಾಲಕನ ವಿರುದ್ಧ ಆಕ್ರೋಶ ಹೊರಹಾಕಿದ್ದರು ಎನ್ನಲಾಗಿದ್ದು ಲಾರಿ ಚಾಲಕ ಕೃಷ್ಣಾಚಾರಿ (74) ಆಸ್ಪತ್ರೆಗೆ ಸಹ ದಾಖಲಾಗಿದ್ದರು, ಪೊಲೀಸ್ ದಾಖಲಾತಿಗಳ ಪ್ರಕಾರ ಅಪಘಾತದಲ್ಲಿ ಲಾರಿ ಚಾಲಕ ಗಾಯಗೊಂಡಿದ್ದು ಸಾಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲು ಮೃತರಾಗಿದ್ದಾರೆ..

ಆದರೆ ಲಾರಿ ಚಾಲಕ ಕೃಷ್ಣ ಆಚಾರ್ ಕುಟುಂಬಸ್ಥರು ಇದು ಅಪಘಾತದಿಂದ ಸಂಭವಿಸಿಲ್ಲ. ಅಪಘಾತದಲ್ಲಿ ಬಿದ್ದ ಕೃಷ್ಣಾಚಾರಿಗೆ ಸ್ಥಳೀಯರು ಹಿಡಿದು ಥಳಿಸಿರುವುದಾಗಿ ಆರೋಪಿಸಿದ್ದಾರೆ. ಆದರೆ ಈ ಆರೋಪ ಪೊಲೀಸ್ ದಾಖಲಾತಿಯಲ್ಲಿ ಇಲ್ಲ. ಕೃಷ್ಣಾಚಾರಿಯೂ ಸಹ ಅಪಘಾತದಿಂದ ಗಾಯಗೊಂಡು ಸಾವನ್ನಪ್ಪಿರುವುದಾಗಿ ದಾಖಲಾಗಿರುವುದಾಗಿ ಸುದ್ದಿ ಲಭ್ಯವಾಗಿದೆ. ಕೃಷ್ಣ ಅವರು ಸಾಗರದ ಸುಭಾಷ್ ನಗರದ ನಿವಾಸಿ ಆಗಿದ್ದರು.


Post a Comment

Previous Post Next Post