ಸಾಗರ: ಬೆಳ್ಳಂಬೆಳ್ಳಗೆ ಸಾಗರ ಪಟ್ಟಣ ಸಮೀಪ ಸಣ್ಣಮನೆ ಸೇತುವೆ ಬಳಿ ಸಂಭವಿಸಿದ ಬೀಕರ ಅಪಘಾತದಲ್ಲಿ ಪ್ರತಿಮಾ (18) ಎಂಬ ವಿಧ್ಯಾರ್ಥಿನಿ ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ...
ಶಿವಮೊಗ್ಗ ಜಿಲ್ಲೆ ಸಾಗರ ಪೇಟೆ ಸಮೀಪ ಸಂಭವಿಸಿದ ಅಪಘಾತದಲ್ಲಿ ಲಾರಿ ಗುದ್ದಿದ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವನಪ್ಪಿದ್ದಾರೆ.ಪ್ರತಿಮಾ ಶಿಕಾರಿಪುರದ ಚಿಕ್ಕಯಲವಟ್ಟಿ ಗ್ರಾಮದವರಾಗಿದ್ದಾರೆ.
ಘಟನೆಯಲ್ಲಿ ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ಈ ಪೈಕಿ ಓರ್ವ ವಿದ್ಯಾರ್ಥಿನಿ ಸ್ಥಿತಿ ಗಂಭೀರವಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಪ್ರತಿಮಾ ವಿದ್ಯಾರ್ಥಿನಿಯನ್ನ ತತ್ ಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದರೂ ಸಹ ವಿಧಿಯಾಟಕ್ಕೆ ವಿದ್ಯಾರ್ಥಿನಿ ಅಸು ನೀಗಿದ್ದಾಳೆ...!!
ಸಾಗರ ಹಾಸ್ಟೆಲ್ನ ವಿದ್ಯಾರ್ಥಿನಿಯರು ಶಿಕಾರಿಪುರ ಹಾಗೂ ಸೊರಬ ಮೂಲದವರು ಎನ್ನಲಾಗಿದ್ದು, ಬೆಳಗ್ಗೆ ಕಾಲೇಜಿಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದ ಬಗ್ಗೆ ಸಾರ್ವಜನಿಕರು ತೀವ್ರ ಆತಂಕ ವ್ಯಕ್ತ ಪಡಿಸಿದ್ದು ಲಾರಿ ಚಾಲಕನ ಅತೀ ವೇಗವೆ ಅಫಘಾತಕ್ಕೆ ಕಾರಣ ಎಂದು ಆಕ್ರೋಶ ಹೊರ ಹಾಕಿದ್ದಾರೆ!!
ಈ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ವಿದ್ದು ತನಿಖೆ ನಂತರವಷ್ಟೇ ದುರಂತದ ಬಗ್ಗೆ ಮಾಹಿತಿ ಬರಬೇಕಿದೆ..
ಅಪಘಾತದ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು. ಮೈ ಜುಮ್ ಎನಿಸುತ್ತದೆ..!!!