ಹೊಸನಗರ : ಮಾರುತಿಪುರ ಶಾರ್ಟ್ ಸರ್ಕ್ಯುಟ್ ಸಂಪೂರ್ಣ ಸುಟ್ಟು ಕರಕಲಾದ ಮನೆ!!!

ಹೊಸನಗರ : ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಬ್ಬಿಗ ಗ್ರಾಮದ ಕೂಡ್ಲಿಕೊಪ್ಪ ಸ್ವಾಮಿ ಅವರ ಮನೆಗೆ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯುಟ್ ಸಂಭವಿಸಿದ್ದು ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಹೊಸನಗರ ಅಗ್ನಿ ಶಾಮಕ ಸಿಬ್ಬಂದಿಗಳು ಅದಾಗಲೇ ಬೆಂಕಿಯ ಕೆನ್ನಾಲಿಗೆ ಮನೆಯನ್ನೆಲ್ಲ ಆವರಿಸಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ....ಕ್ಷಣ ಮಾತ್ರದಲ್ಲಿ ಸುಟ್ಟು ಭಸ್ಮವಾಗಿದೆ...

ಸ್ವಾಮಿ ಅವರ ಕುಟುಂಬ ಜೀವನಕ್ಕಾಗಿ ಕೃಷಿ ಕೂಲಿ ಕಾರ್ಮಿಕರಾಗಿದ್ದು ಅಗ್ನಿ ಅವಗಘದಿಂದ ಸ್ವಾಮಿ ಅವರ ಮನೆ ಪರಿಕರ ಸಂಪೂರ್ಣ ನಾಶ ವಾಗಿದ್ದು ಜೀವನ ನೆಡೆಸಲು ಕಷ್ಟ ವಾಗಿದೆ.. ಈ ಕೂಡಲೇ ಸಂಬಂಧಪಟ್ಟ ಗ್ರಾಮಡಳಿತ ಹಾಗೂ ಇಲಾಖೆ ಇತ್ತ ಗಮನಹರಿಸಿ ಸರ್ಕಾರದಿನ ಸಿಗಬೇಕಾದ ಪರಿಹಾರ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ..

ಕುಟುಂಬ ಅತಿ ಕಡು ಬಡ ಕುಟುಂಬವಾಗದ್ದು . ಕೂಲಿ‌ ಕೆಲಸ ಮಾಡಿ ಜೀವನ ನೆಡಸುತ್ತಿರುತ್ತಾರೆ. ಹಾಗೂ ಇಬ್ಬರು ಸಣ್ಣ ಮಕ್ಕಳು ಇದ್ದು ಕುಟುಂಬದ ಕಷ್ಟವನ್ನು ಅರಿತು ಗ್ರಾಮಸ್ಥರು ಹಾಗೂ ಸಹಕರಿಸುವಂತೆ ಕೋರಿದ್ದಾರೆ....

ದಾನಿಗಳ‌‌ ಬಳಿ ಬೇಡಿ‌ಕೊಳ್ಳುವುದೇನೆಂದರೆ ಬಟ್ಟೆ,ಪಾತ್ರೆ, ಇನ್ನೇತರ ತುರ್ತು ಗೃಹಪಯೋಗ ವಸ್ತುಗಳನ್ನು ತೆಗೆದು ಕೊಳ್ಳುವ ಸಲುವಾಗಿ ತಮ್ಮ ಕೈಲಾದ  ಸಹಾಯವನ್ನು ಮಾಡಿ ಎಂದು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತಿದ್ದೇವೆ....

ಮಹೇಶ್ ಎಸ್ ಬಾಣಿಗ

9844733213ಗೂಗಲ್ ಪೇ

ಇಂದ್ರೇಶ್ ಎನ್ ಹೊಸಕೆಸರೆ

8951474804 ಪೋನ್ ಪೇ

ಬಡ‌ ಕುಟುಂಬಕ್ಕೆ ತಮ್ಮ ಕೈಲಾದ ಸಹಾಯವನ್ನು ಮಾಡುವ ಮನಸ್ಸು ನಿಮ್ಮದಾಗಲಿ..



ವರದಿ : ಅಜಿತ್ ಗೌಡ ಬಡೇನಕೊಪ್ಪ 

Post a Comment

Previous Post Next Post