ಹೊಸನಗರ :ಸೈಕ್ಲೋನ್ ಎಫೆಕ್ಟ್! !ವಿದ್ಯುತ್ ತಂತಿ ತುಳಿದು ರೈತ ಸಾವು!


ಹೊಸನಗರ :ಸೈಕ್ಲೋನ್ ಎಫೆಕ್ಟ್ ವಿದ್ಯುತ್ ತಂತಿ ತುಳಿದು ರೈತ ಸಾವು!!ಹೊಸನಗರ ತಾಲೂಕು ರಿಪ್ಪನ್ ಪೇಟೆ ಸಮೀಪದ ನಂಜವಳ್ಳಿ ಗ್ರಾಮದಲ್ಲಿ ನಡೆದಿದ್ದು.ಹರತಾಳು ಗ್ರಾಪಂ ವ್ಯಾಪ್ತಿಯ ನಂಜವಳ್ಳಿ ಗ್ರಾಮದ ರೈತ ಶೇಷಗಿರಿ(45) ಮೃತ ದುರ್ದೈವಿಯಾಗಿದ್ದಾರೆ.


ಪತ್ನಿ ಉಳಿಸಲು ಹೋಗಿ ಪ್ರಾಣ ಹೊಯ್ತು 

 ಬೆಳ್ಳಂ-ಬೆಳಗ್ಗೆ ಮನೆಯ ಬಳಿ ಶೇಷಗಿರಿ ರವರ ಪತ್ನಿ ಹೂ ತರಲು ಹೋದ ಸಂದರ್ಭದಲ್ಲಿ  ವಿದ್ಯುತ್ ತಾಗಿ ಕೂಗಿದ್ದಾರೆ ಕೂಡಲೇ ಅವರನ್ನು ರಕ್ಷಿಸಲು ಹೋದ ಶೇಷಗಿರಿ ರವರು ಪಾದರಕ್ಷೆ ಧರಿಸದೆ ವಿದ್ಯುತ್ ತಂತಿಯನ್ನು ತುಳಿದಿದ್ದಾರೆ.

ಮೂಲತಃ ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿ ಗ್ರಾಮದ ಒಡ್ಡಿನಬೈಲು ನಿವಾಸಿಯಾದ ಇವರು ಇತ್ತೀಚಿಗೆ ಅಷ್ಟೇ ಜಮೀನು ಖರೀದಿಸಿ ನಂಜವಳ್ಳಿಯಲ್ಲಿ ವಾಸ ಮಾಡುತ್ತಿದ್ದರು...

ಮೆಸ್ಕಾಂ ನಿರ್ಲಕ್ಷ ದೋರಣೆ:

ವಿದ್ಯುತ್ ತಂತಿ ತುಂಡಾಗಿ ಐಬಿಎಕ್ಸ್ ತಂತಿ ಬೇಲಿ ಮೇಲೆ ಬಿದ್ದಿರುವ ಬಗ್ಗೆ ಮೃತ ಶೇಷಗಿರಿ ಅವರು ಮೆಸ್ಕಾಂ ಇಲಾಖೆಗೆ ಮೂರು ಬಾರಿ ಮಾಹಿತಿ ಸಲ್ಲಿಸಿದ್ದರು ಎನ್ನಲಾಗುತಿದ್ದು ಇಲಾಖೆಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಮೃತ ದೇಹ ರವಾನೆ ಮಾಡಿದ್ದು,ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ...



Post a Comment

Previous Post Next Post