ಹೊಸನಗರ : ತಾಲೂಕಿನ ಸರ್ವ ಜನಾಂಗದ ಪ್ರಸಿದ್ದ ಶ್ರೀ ಮಠಗಳಲ್ಲೊಂದಾದ ಸದಾನಂದ ಶಿವಯೋಗ ಆಶ್ರಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ ಕಾರ್ತಿಕ ದೀಪೋತ್ಸವವನ್ನ ಭಾನುವಾರ 20ನೇ ತಾರೀಕಿನಂದು ಹಮ್ಮಿಕೊಳ್ಳಲಾಗಿದ್ದು. ಸಾರ್ವಜನಿಕರು ಶ್ರೀ ಮಠದ ಕಾರ್ಯಕ್ರಮದಲ್ಲಿ ಪಾಲ್ಗೊಗೊಳ್ಳಲು ಮಠದ ಶ್ರೀಗಳಾದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಅವರು ಕರೆ ಕೊಟ್ಟಿದ್ದಾರೆ..
ನೀವು ಬೆಳಗುವ ಪ್ರತಿಯೊಂದು ದೀಪವು ನಿಮ್ಮ ಮೊಗದಲ್ಲಿ ಸಂತೋಷದ ಹೊಳಪನ್ನು ಮೂಡಿಸಲು ಎಂದು ಆಶಿಸುತ್ತಾ ಶ್ರೀ ಮಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ವರು ಬನ್ನಿ ಸಮಭಾವ ತನ್ನಿ ಎಂದು ಆಮಂತ್ರಣ ನೀಡಿದ್ದಾರೆ...
ಕಾರ್ಯಕ್ರಮದಲ್ಲಿ ವಿಶೇಷವಾಗಿ ಭಾನುವಾರದಂದು ದೀಪೋತ್ಸವ ಜೊತೆ -ಜೊತೆಗೆ ಕೋಲಾಟ ಹಾಗೂ ದಕ್ಷಿಣ ಕನ್ನಡ ವೈಶಿಷ್ಟತೆ ಸಾರುವ ದಂದಿ ಆಟ ವಿದ್ದು ನೋಡುಗರ ಆಕರ್ಷಣೆ ಕೇಂದ್ರವಾಗಲಿದೆ......
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ಶ್ರೀ ಮಠದ ಪೂಜ್ಯ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ವಹಿಸಲಿದ್ದಾರೆ...
Tags:
ಹೊಸನಗರ