ಹೊಸನಗರ : ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀಯುತ ಮಂಜುನಾಥ್ ಹೆಚ್ ಡಿ ಯವರಿಗೆ ಕಲ್ಲುವಿಡಿ-ಅಬ್ಬಿಗಲ್ ಮತ್ತು ತೊಗರೆ ಗ್ರಾಮಸ್ಥರ ಅಭಿನಂದನೆ

ಹೊಸನಗರ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲುವಿಡಿ ಅಬ್ಬಿಗಲ್ ನಲ್ಲಿ 2022-23 ನೇ ಸಾಲಿನ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀಯುತ ಮಂಜುನಾಥ್ ಹೆಚ್ ಡಿ ಯವರಿಗೆ ಕಲ್ಲುವಿಡಿ-ಅಬ್ಬಿಗಲ್ ಮತ್ತು ತೊಗರೆ ಗ್ರಾಮಸ್ಥರು ಅಭಿನಂದನಂದಿಸಿದರು. 

ಕಾರ್ಯಕ್ರಮದಲ್ಲಿ ಹೊಸನಗರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಕೃಷ್ಣಮೂರ್ತಿ ಹೆಚ್ ಆರ್, ತ್ರಿಣಿವೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ಕೃಷ್ಣಮೂರ್ತಿ, ಸದಸ್ಯರಾದ ಶ್ರೀಮತಿ ಲೀಲಾವತಿ, ಪಿ ಡಿ ಓ ರಂಜಿತಾ,  ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುರೇಶ್, ಕಾರ್ಯದರ್ಶಿ ಮಹಮ್ಮದ್ ಅಲ್ತಾಫ್, ಖಜಾಂಚಿ ಪುಟ್ಟಸ್ವಾಮಿ, ಇ‌ ಸಿ ಓ ಗಳಾದ ಕರಿಬಸಪ್ಪ ಮತ್ತು ದುಗ್ಗಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವಣ್ಣಪ್ಪ, ಬ.ಮು.ಶಿ ಸುಶಿಲಮ್ಮ, ಮಲ್ಡಪ್ಪ , ಸೊನಲೆ ಮತ್ತು ಆರ್ ಸಿ ಪುರ ಕ್ಲಸ್ಟರ್ ನ ಎಲ್ಲಾ ಶಿಕ್ಷಕರು,   ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ನರಸಿಂಹ, ಸದಸ್ಯರುಗಳು, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ಸಹ ಶಿಕ್ಷಕಿಯಾದ ಶ್ರೀಮತಿ ಶಿಲ್ಪಾ ಸ್ವಾಗತಿಸಿದರೆ, ಚೈತ್ರ ವಂದಿಸಿದರು, ಮೇಘರಾಜ್ ಕಾರ್ಯಕ್ರಮ ನಿರೂಪಿಸಿದರು.

Post a Comment

Previous Post Next Post