ಶಿವಮೊಗ್ಗ : ಸಾಗರ ಐತಿಹಾಸಿಕ ಕೆಳದಿ ಸಾಮ್ರಾಜ್ಯದ ಅಮೂಲ್ಯ ಕೊಡುಗೆ ಚಂಪಕ ಸರಸು ಶೀಘ್ರದಲ್ಲಿ ಅಭಿವೃದ್ಧಿ!! ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ!!

ಸಾಗರ :ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಮಲಂದೂರುನಲ್ಲಿರುವ ಚಂಪಕ ಸರಸ್ಸು ಮಹಾಂತಿನಮಠ ಶೀಘ್ರದಲ್ಲಿ ಅಭಿವೃದ್ಧಿ ಕಾಣಲಿದೆ ಎಂದು ಶಿವಮೊಗ್ಗ ಸಂಸದರಾದ ಬಿ ವೈ ರಾಘವೇಂದ್ರ ಭರವಸೆ ನೀಡಿದರು.


ನೂರಾರು ವರ್ಷಗಳ ಇತಿಹಾಸವಿರುವ ಚಂಪಕ ಸರಸ್ಸು ಮಹಂತಿನ ಮಠವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಮುರುಘಾಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ನೂತನ ಟ್ರಸ್ಟ್ ನಿರ್ಮಿಸಲಾಗಿತ್ತು.


ಇಂದು ಈ ಮಹಂತಿನ ಮಠದ ಅಭಿವೃದ್ಧಿ ವಿಚಾರವಾಗಿ  ಸಂಸದರಾದ ಬಿ ವೈ ರಾಘವೇಂದ್ರ ಹಾಗೂ ಸಾಗರ ಶಾಸಕ ಹರತಾಳು ಹಾಲಪ್ಪ ಅವರಿಗೆ ಟ್ರಸ್ಟ್ ನ ವತಿಯಿಂದ ಮನವಿ ನೀಡಲಾಯಿತು.



ಸುಮಾರು 8.6ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಸಹ ನೀಡಲಾಯಿತು...

ಇದನ್ನು ಗಮನಿಸಿದ ಸಂಸದರು ಚಂಪಕ ಸರಸ್ಸು ಮಹಾಂತಿನಮಠ ವನ್ನು ಶೀಘ್ರದಲ್ಲಿ ಉತ್ತಮ ಪ್ರವಾಸಿ ತಾಣ ಮಾಡುವ ಭರವಸೆಯನ್ನು ನೀಡಿದರು.


ಶಾಸಕ ಹರತಾಳು ಹಾಲಪ್ಪ ಮಾತನಾಡಿ ನಮ್ಮ ಸರ್ಕಾರದಿಂದ ಕೂಡಲೇ ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಮಾಡುವ  ಎಲ್ಲಾ ಸಹಕಾರವನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು


ವರದಿ : ಪವನ್ ಕುಮಾರ ಕಠಾರೆ...

Post a Comment

Previous Post Next Post