ಹೊಸನಗರ : ಬೀಕರ ರಸ್ತೆ ಅಪಘಾತದಲ್ಲಿ ಮಾಜಿ ಯೋಧ ನಿಧನ!!!


ಹೊಸನಗರ :ತಾಲೂಕಿನ ಮಾವಿನಹೊಳೆ ಗ್ರಾಮದ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಅಪ್ಪಟ ದೇಶಪ್ರೇಮಿ ಮಾಜಿ ಯೋಧ ಚೆನ್ನಪ್ಪ ಅವರು ತಡರಾತ್ರಿ ಶಿವಮೊಗ್ಗ ಸಮೀಪ ನೆಡೆದ ಬೀಕರ ಅಪಘಾತದಲ್ಲಿ ಮೃತರಾಗಿದ್ದಾರೆ..

ಮೃತ ಚೆನ್ನಪ್ಪ ಬೆಂಗಳೂರು ನಿಂದ ಶಿವಮೊಗ್ಗ ಕ್ಕೆ ಕ್ರೀಡಾಕೂಟ ಸಲುವಾಗಿ ಬೆಂಗಳೂರುಗೆ ಹೋಗಿದ್ದ ಪುತ್ರಿಯನ್ನ ವಾಪಾಸ್ ಕರೆತರುವಾಗ ಮಾರ್ಗಮದ್ಯೆ ಶಿವಮೊಗ್ಗ ಸಮೀಪ ತಮ್ಮ ಮಾರುತಿ 800 ಆಲ್ಟೊ ಕಾರು ಅಪಘಾಟಗೀಡಾಗಿದ್ದು, ಈ ದುರ್ಘಟನೆಯಲ್ಲಿ ಮಾಜಿ ಯೋಧ ಚೆನ್ನಪ್ಪ ಅವರು ಮೃತರಾಗಿದ್ದು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತಮ್ಮ ಪತ್ನಿ ಹಾಗೂ ಪುತ್ರಿ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ... 

ಗಾಯಗೊಂಡ ಪುತ್ರಿ ಹಾಗೂ ಪತ್ನಿಯನ್ನು ಹತ್ತಿರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾದ ಮಾಡಲಾಗಿದ್ದು,ಮೃತರ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು ಮಾವಿನಹೊಳೆ ಗ್ರಾಮದಲ್ಲಿ ನೀರವ ಮೌನ ಮಡುಗಟ್ಟಿದೆ..

Post a Comment

Previous Post Next Post