ಹೊಸನಗರ : ತಾಲೂಕಿನ ಮಾರುತಿಪುರ ಪಂಚಾಯತ್ ವ್ಯಾಪ್ತಿಯ ಪ್ರಸಿದ್ಧ ದೇವಾಲಗಳಲ್ಲೊಂದದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ, ಈ ಬಾರಿ ಬಹು ವಿಜೃಂಭಣೆಯಿಂದ ಶರನ್ನವರಾತ್ರಿ ಹಾಗೂ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಎಲ್ಲ ಕಾರ್ಯಕ್ರಮವನ್ನ ಲೋಕಕಲ್ಯಾಣರ್ಥವಾಗಿ, ಭಕ್ತರ ಸಮ್ಮುಖ ಊರಿನ ಶ್ರೇಯೋಭಿಲಾಷಿ ಗಾಗಿ ಆಯೋಜನೆ ಮಾಡಲಾಗಿದ್ದು, ವಿಶೇಷವಾಗಿ ಶ್ರೀದೇವಿಗೆ ನವರಾತ್ರಿ ಹಬ್ಬದ ಪ್ರಯುಕ್ತ ಒಂಬತ್ತು ದಿನಗಳ ಕಾಲ ದೇವಿಯ 9 ಅವತಾರಗಳ, ವಿಶಿಷ್ಟ ಅಲಂಕಾರ ಹಾಗೂ ಆರಾಧನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ದೇವಿಯ ನವ ಅವತಾರಗಳ ವಿಶೇಷ ಆರಾಧನೆ :
ಅಕ್ಟೋಬರ್ 5ನೇ ತಾರೀಕು ಬುಧವಾರ ವಿಜಯದಶಮಿದಂದು,ಶ್ರೀ ಜಗನ್ಮಾತೆ ದುರ್ಗಾ ದೇವಿಯ ವಿಜಯೋತ್ಸವ, ಸಂಕಲ್ಪ ಹಾಗೂ ಊರಿನವರ ಸಮ್ಮುಖದಲ್ಲಿ "ಬನ್ನಿ ಮುಡಿಯುವ ಕಾರ್ಯಕ್ರಮವನ್ನ" ದೇವಾಲಯದ ಸೇವಾ ಸಮಿತಿ ಹಾಗೂ ದೇವಾಲಯ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾರುತಿಪುರ ಇವರುಗಳ ಸಹಕಾರದೊಂದಿಗೆ ಕಾರ್ಯಕ್ರಮ ಸಂಪನ್ನ..!
ವರದಿ :ಅಜಿತ್ ಗೌಡ ಬಡೇನಕೊಪ್ಪ
Tags:
ಹೊಸನಗರ