ಹೊಸನಗರ : ಮೂಲೆಗದ್ದೆ ಸದಾನಂದ ಶಿವಯೋಗ ಆಶ್ರಮದಲ್ಲಿ ಜರುಗಿದ ಹಾನಗಲ್ಲ ಕುಮಾರ ಶಿವಯೋಗಿಗಳ ಜನ್ಮದಿನೋತ್ಸವ!!

 ಹೊಸನಗರ : ತಾಲೂಕಿನ ಮೂಲೆಗದ್ದೆಯ ಶಿವಯೋಗ ಆಶ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಕರಾದ ನಾಡು ಕಂಡ ಅಪೂರ್ವ - ಯೋಗಿಗಳಾದ ಹಾನಗಲ್ಲ ಕುಮಾರಶಿವಯೋಗಿಗಳ  1೫೫ನೇ ಜನ್ಮದಿನೋತ್ಸವನ್ನ ಸರಳ-ಸುಂದರವಾಗಿ ಸರ್ವಜನಾಂಗದ ಶಾಂತಿಯ ತೋಟ ಶ್ರೀ ಮಠ ಮೂಲೆಗದ್ದೆ ಸದಾನಂದ ಶಿವಯೋಗ ಆಶ್ರಮದಲ್ಲಿ ಜರುಗಿತು.

ಕಾರ್ಯಕ್ರಮಕ್ಕೆ ವಿಶೇಷ ಅಭ್ಯಾಗತರಾಗಿ ಆಗಮಿಸಿದ ಪಂಚಪೀಠಗಳಲ್ಲಿ ಒಂದಾದ ಶ್ರೀ ಶೈಲ ಸೂರ್ಯ ಸಿಂಹಾಸನಾಧೀಶ್ವರ 1008 ಜಗದ್ಗುರು ಡಾ ಚೆನ್ನಸಿದ್ದರಾಮ ಭಾಗವತ್ಪಾದರು ಧರ್ಮಸಭೆ ಉದ್ದೇಶಿಸಿ ಮಾತನಾಡಿ,ಸಮ-ಸಮಾಜಕ್ಕೆ ಜಾತಿ ವರ್ಗ ವರ್ಣರಹಿತ, ಬಸವಣ್ಣನವರ ಆಶಯ ಗಳನ್ನ ಸಾಕಾರ ಗೊಳಿಸುವ ನಿಟ್ಟಿನಲ್ಲಿ ಅವಿತರತ ಶ್ರಮಿಸಿ, ಶಿವಯೋಗ ಮಂದಿರ ಮುಕೇನ ಸಹಸ್ರಾರು ಸಂತರನ್ನ ಸಮಾಜಕ್ಕೆ ಅರ್ಪಣೆ ಮಾಡಿದ ಕೀರ್ತಿ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ.ಸ್ವಾಮಿಆದವರು ಸ್ಥಾವರಕ್ಕೆ ಒಡೆಯನಲ್ಲ ಸಮಾಜದ ನಿಷ್ಠಾವಂತ ಸೇವಕ,ಎಂದು ತೋರಿಸಿದ ಜಂಗಮಪುಂಗವರು..!!ಶಿವಯೋಗ ಮಂದಿರ ಸಾಧಕರು ವಿರಕ್ತ ಗುರುಮಠಗಳಿಗೆ ಸ್ವಾಮಿಗಳಾಗಿ ಸಮ ಸಮಾಜಕ್ಕೆ ಧರ್ಮಭೋಧನೆಯ, ನೈತಿಕ ಶಿಕ್ಷಣ ಕೊಡುವಲ್ಲಿ ಕ್ರಾಂತಿ ಮಾಡಿದರು, ಇಂದು ಅದೇ ರೀತಿಯಲ್ಲಿ ಸದಾನಂದಾ ಶಿವಯೋಗ ಅಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ ಅವರು ಇದೆ ನಿಟ್ಟಿನಲ್ಲಿ ಗುರು -ವಿರಕ್ತರ ಒಂದೇ ವೇದಿಕೆ ತರುವ ಮೂಲಕ ಸಮಾಗಮ ಪರಿಕಲ್ಪನೆ ಅತ್ಯಂತ ಸಂತಸದ ಕ್ಷಣವಾಗಿದೆ ಎಂದರು...

ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದರು ಮತ್ತೊರ್ವ ಯತಿಗಳಾದ ಆನಂದಪುರದ ಮುರುಘರಾಜೇಂದ್ರ ಮಹಾಸಂಸ್ಥಾನದ ಡಾ| ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ನಾಡಿಗೆ ಹಾನಗಲ್ಲ ಕುಮಾರಶಿವಯೋಗಿಗಳ ಆಶಯಗಳನ್ನ, ಸಮಾಜಕ್ಕೆ ಸಲ್ಲಿಸಿದ ಅಪೂರ್ವ ಸೇವೆಯನ್ನು, ಸಮಗ್ರ ಜೀವನಗಾಥೆಯನ್ನ ಜನಮಾನಸಕ್ಕೆ, ಹಾಗೂ ಯುವ ಸಮುದಾಯದಕ್ಕೆ ತಿಳಿಸುವ ಮೂಲಕ ಗುರು -ವಿರಕ್ತಮಠರೆಲ್ಲರೂ ಒಂದಾಗಿ ಜಾಗೃತಿ ಮೂಡಿಸಬೇಕಾಗಿದೆ.

ಕಾರ್ಯಕ್ರಮದಲ್ಲಿ ವೀರಪುರ ಮಠದ ಷ.ಬ್ರ.ಡಾ.ಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮೀಜಿ, ಕೋಣಂದೂರು ಬೃಹನ್ಮಠದ ಷ.ಬ್ರ.ಶ್ರೀಪತಿಪಂಡಿತರಾಧ್ಯ ಶಿವಾಚಾರ್ಯರು, ಕ್ಯಾಸನೂರು ಮಠದ ಷ.ಬ್ರ.ಗುರುಮರುಳ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಪಾಲ್ಗೊಂಡಿದ್ದರು....

ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕರಾದ ಇಮ್ತಿಯಾಜ್ ಅವರ ವಚನ ಗಾಯನ ಕಾರ್ಯಕ್ರಮದಲ್ಲಿ ಕಣ್ಮನ ಸೆಳೆಯಿತು...



Post a Comment

Previous Post Next Post