ಹೊಸನಗರ : ತಾಲೂಕಿನ ಹಿರಿಯ ಸ್ವತಂತ್ರ ಹೋರಾಟಗಾರರಿಗೆ ಸನ್ಮಾನ ಹಾಗೂ ಗೌರವ ವಂದನೆ!!!!


ಹೊಸನಗರ :ಭಾರತವ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಹಿನ್ನಲೆಯಲ್ಲಿ ಸಾಗರದಲ್ಲಿ ಬುಧವಾರದ ಒಂದು ಸರಳ ಸುಂದರ ಕಾರ್ಯಕ್ರಮ ಆನಂದಪುರದ ಮುರುಘಾ ಮಠದ ಸ್ವಾಮೀಜಿ ಶ್ರೀ ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಶ್ರೀ ಗಳ ಉಪಸ್ಥಿತಿಯಲ್ಲಿ ಮಾಜಿ ಸಂಸದ  ಕೆ. ಜಿ ಒಡೆಯರ್ ಅಭಿಮಾನಿ ಬಳಗದಿಂದ ಸ್ವತಂತ್ರ ಹೋರಾಟಗಾರರ ಕುಟುಂಬಗಳನ್ನು ಗುರುತಿಸಿ ಅವರಿಗೆ ಸನ್ಮಾನಿಸಲಾಯಿತು ಈ ಕಾರ್ಯಕ್ರಮದಲ್ಲಿ ಹೊಸನಗರದ ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷರಾದ ಹಾಗೂ ಹಾಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಆದ AV ಮಲ್ಲಿಕಾರ್ಜುನ ಅವರ ತಂದೆ ಸ್ವತಂತ್ರ ಹೋರಾಟಗಾರರಾದ ವೀರಭದ್ರಪ್ಪ ಅವರ ಪರವಾಗಿ ಅವರ ಪತ್ನಿ ಪಾರ್ವತಮ್ಮ ಮತ್ತು ಹೊಸನಗರ ತಾಲ್ಲೂಕಿನ ಗುಡ್ಡೆಕೊಪ್ಪ ವಾಸಿ ಸ್ವತಂತ್ರ ಹೋರಾಟಗಾರ ತೊಟಪ್ಪ  ಗೌಡರ ಪರವಾಗಿ ಗುಡ್ಡೆಕೊಪ್ಪ ಬಸವರಾಜ ಅವರಿಗೆ ಸನ್ಮಾನಿಸಲಾಯಿತು ತಾಲೂಕಿನ

75 ರ ಸ್ವತಂತ್ರ ದಿನದ ಈ ಸಂದರ್ಭದಲ್ಲಿ ತಾಲೂಕಿನ ಕೆಲವು ಹೋರಾಟಗಾರರ ಗುರುತಿಸಿದ ಈ ಸಂದರ್ಭದಲ್ಲಿ ಕೆ. ಜಿ ಒಡೆಯರ್ ಅಭಿಮಾನಿಗಳಿಗೆ ನಾವು ಒಂದು ಧನ್ಯವಾದಗಳನ್ನು ಈ ಸಂದರ್ಭದಲ್ಲಿ ಸಲ್ಲಿಸಬೇಕು ಎಂದು ಮುರುಘಾ ಮಠದ ಗುರುಗಳು ಅಭಿನಂದಿಸಿದರು


✍️✍️ವರದಿ : ಅಜಿತ್ ಗೌಡ ಬಡೇನಕೊಪ್ಪ 

Post a Comment

Previous Post Next Post