ಹೊಸನಗರ : ತಹಸೀಲ್ದಾರ್ ಮನವಿ ಮೇರೆಗೆ ಸತ್ಯಾಗ್ರಹ ವಾಪಾಸ್!!!

ಹೊಸನಗರ : ಕಳೆದೊಂದು ದಿನದಿಂದ ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಿರತ ದಿನೇಶ್ ಕೆರೆ ಕೈ ಅವರು ಇಂದು ತಹಸೀಲ್ದಾರ್ ಮನವಿಗೆ ಸ್ಪಂದಿಸಿ ಧರಣಿಯನ್ನ ವಾಪಾಸ್ ಪಡೆದ್ದಿದ್ದಾರೆ...

ಹೌದು ತಹಸೀಲ್ದಾರ್ ಅವರು ಖುದ್ದು ಪ್ರತಿಭಟನಾ ನಿರತ ದಿನೇಶ್ ಅವರನ್ನ ಭೇಟಿ ಮಾಡಿ, ಸರಕಾರಿ ಆದೇಶ ಅನ್ವಯ, ಕಾಯ್ದೆ ಅನುಸಾರವಾಗಿ ಕ್ರಮ ಕೈಗೊಳ್ಳತ್ತೇವೆ ಎಂದರು..ಹಾಗೂ ಸದರಿ ಹೊಸನಗರ ತಾಲೂಕು ಹಲುಸಲೇ ಮಳವಳ್ಳಿ ಗ್ರಾಮದ ಸರ್ವೇ ನಮ್ 25 ರಲ್ಲಿ ಸರ್ಕಾರಿ ಕೆರೆಯನ್ನ ಒತ್ತುವರಿ ತೆರವು ಆದೇಶ ನೀಡಿದಾಗಲು, ಆದೇಶ ಪಾಲನೆಯಾಗದೆ ಇದ್ದಿದ್ದು ಹಾಗೂ ತಮ್ಮ ಜಮೀನಿಗೆ ಹೋಗುವ ದಾರಿಯನ್ನು ಬಂದ್ ಮಾಡಿದ ಆರೋಪ ನಮ್ಮ ಗಮನಕ್ಕೆ ಬಂದಿದ್ದು,ಇದಕ್ಕೆ ಸಂಭಂದ ಪಟ್ಟಂತೆ ತಹಸೀಲ್ದಾರ್ ರಾಜೀವ್ ಅವರು ದಿನೇಶ್ ಕೆರೆ ಕೈ ಅವರ ಮನವಿ ಪತ್ರಕ್ಕೆ ಹಿಂಬರಹದಲ್ಲಿ ಸಂಕ್ಷಿಪ್ತರೂಪದಲ್ಲಿ ಪ್ರತಿಕ್ರಿಯೆ ನೀಡಿ ಹೋರಾಟ ಕೈ ಬಿಡುವಂತೆ ಮನವೊಲಿಸಿ, ಇದೆ ಆಗಸ್ಟ್ 26 ಕ್ಕೆ ಸೂಕ್ತ ದಾಖಲಾತಿಯೊಂದಿದೆ ತೆರವು ಕಾರ್ಯಾಚರಣೆ ಮಾಡಲಾಗವುದು ಎಂಬ ಆದೇಶ ಹೊರಡಿಸಿದ್ದಾರೆ..

ವರದಿ :ಅಜಿತ್ ಗೌಡ ಬಡೇನಕೊಪ್ಪ 

Post a Comment

Previous Post Next Post