ಸಾಗರ :ಕೇವಲ ಎಂಟು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದ ಯುವತಿ! ಆತ್ಮಹತ್ಯೆಗೆ ಶರಣು

ಸಾಗರ :ಕೇವಲ ಎಂಟು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದ ಯುವತಿ!!ಆತ್ಮಹತ್ಯೆಗೆ ಶರಣಾದ ಘಟನೆ  ಶಿವಮೊಗ್ಗ ಜಿಲ್ಲೆ ಸಾಗರ  ತಾಲೂಕು ಸಮೀಪ ಅಣಲೇಕೊಪ್ಪದಲ್ಲಿ ನೆಡೆದಿದ್ದು.20 ವರ್ಷದ ನವ್ಯಾ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಯುವತಿ ಚಿತ್ರದುರ್ಗ ಜಿಲ್ಲೆಯ ನಿವಾಸಿಯಾಗಿದ್ದು,ಅದು ಹೇಗೋ ಪರಿಚಿತವಾಗಿದ್ದ  ನೀತೀಶ್ ಪರಿಚಯ ಪ್ರೇಮಕ್ಕೆ ತಿರುಗಿದ್ದು ತದನಂತರ 
ವಿವಾಹವಾಗಿ ಸಾಗರಕ್ಕೆ ಶಿಫ್ಟ್ ಆಗಿದ್ದಳು.
ಟೈಲರ್ ವೃತ್ತಿ ಮಾಡುತ್ತಿದ್ದ ನಿತೀಶ್ ಅವರನ್ನು 
ಪ್ರೀತಿಸಿ 8 ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ನಿತೀಶ್ ಹಾಗೂ ನವ್ಯ ಅಣಲೇಕೊಪ್ಪದಲ್ಲಿ ಹೊಸ ಬಾಡಿಗೆಮನೆ ಮಾಡಿ 
ಇನ್ನೇನು ನಿತೀಶ್ ಒಟ್ಟಿಗೆ ನವ್ಯ ನವಜೀವನ ಮಾಡಬೇಕು ಎನ್ನುವುದರೊಳಗೆ,
ಅದೇನೋ ಗೊತ್ತಿಲ್ಲ ಇದ್ದಕ್ಕಿದ್ದಂತೆ ದಾಂಪತ್ಯದಲ್ಲಿ ಬಿರುಕು ಅಥವಾ ವೈಯಕ್ತಿಕ ಕಾರಣವೊ? ತಿಳಿದಿಲ್ಲ 
ಶನಿವಾರ ತಾವು ವಾಸಿಸುತ್ತಿದ್ದ, ಬಾಡಿಗೆ ಮನೆಯ ಮೇಲ್ಛಾವಣಿಗೆ ನವ ವಿವಾಹಿತೆ ನವ್ಯ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ನವ್ಯ ಆತ್ಮಹತ್ಯೆಯ ಸುದ್ದಿ ಹೆತ್ತವರಿಗೆ ತಿಳಿದು ದಿಗ್ಭ್ರಾಂತರಾಗಿದ್ದಾರೆ!!
ನವ್ಯಾಳ  ಸಾವು  ಅಸಹಜವಾಗಿದ್ದು, ಅನುಮಾನ ಮೂಡಿಸುತ್ತಿದೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಇದ್ದಕ್ಕಿದ್ದಂತೆ ಯಾರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಇದರ ಹಿಂದೆ ಬಲವಾದ ಕಾರಣವಿದೆ ಎಂದು ಹೆತ್ತ ತಂದೆ ತಾಯಿಗಳು ಆರೋಪಿಸಿದ್ದಾರೆ

ಈ ಕುರಿತು ಮೃತಳ ತಂದೆ ಜಗದೀಶ್ ಸಾಗರ  ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Post a Comment

Previous Post Next Post