ಶಿವಮೊಗ್ಗ :ನದಿಯ ನೀರಲ್ಲಿ ಕೊಚ್ಚಿ ಹೋದ ವೃದ್ದೆಯ ಶವ ಪತ್ತೆ!!

ಶಿವಮೊಗ್ಗ :ಕುಮಧ್ವತಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ವೃದ್ಧೆ ಶವವಾಗಿ ಪತ್ತೆಯಾಗಿದ್ದಾಳೆ. ನದಿಯಲ್ಲಿ ವೃದ್ದೆಯ ಮೃತದೇಹ ಪತ್ತೆಯಾಗಿದೆ.!!

ಚೋರಡಿಯಿಂದ ನದಿಯ ತಟದಲ್ಲಿರುವ ಚೌಡೇಶ್ವರಿ ದೇವಸ್ಥಾನಕ್ಕೆ ಪೂಜೆಗೆಂದು ಮನೆಯಲ್ಲಿ ಹೇಳಿ ಬಂದಿದ್ದ 64 ವರ್ಷದ ವೃದ್ಧೆ ಕುಮಧ್ವತಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಮೂರುದಿನದ ನಂತರ  ಆಕೆಯ ಮೃತದೇಹ ಪತ್ತೆಯಾಗಿದೆ.ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ವೃದ್ಧೆಯನ್ನ ನಾಗರತ್ನ ಎಂದು ಗುರುತಿಸಲಾಗಿದೆ. ಈಕೆ ಆತ್ಮಹತ್ಯೆಗಾಗಿ ನದಿಗೆ ಹಾರಿರುವುದಾ ಅಥವಾ ಪೂಜೆಗೆಂದು ನದಿಗೆ ಇಳಿದ ಪರಿಣಾಮ ನೀರುಪಾಲಾಗಿರುವುದಾ ಎಂಬುದರ ಬಗ್ಗೆ ಕುಟುಂಬಸ್ಥರೇ ಸ್ಪಷ್ಟಪಡಿಸಬೇಕಿದೆ. ಅಥವಾ ತನಿಖೆಯಿಂದ ತಿಳಿದುಬರಬೇಕಿದೆ. ಕುಂಸಿ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ದಾಖಲಾಗಿತ್ತು.

ಆಕೆಯ ಹುಡುಕಾಟಕ್ಕಾಗಿ ಅಗ್ನಿಶಾಮಕದಳದ ಸಿಬ್ಬಂದಿಗಳು ಸತತ ಕಾರ್ಯಾಚರಣೆ ನೆಡಿಸಿದ್ದು ಸೇತುವೆಯ ಕಟ್ಟೆಯ ಮೇಲೆ ಪೂಜಾ ಬುಟ್ಟಿ ಹಾಗೂ ಬಟ್ಟೆಯೊಂದು ಇಟ್ಟು ನಾಗರತ್ನಮ್ಮ ಮಿಸ್ಸಿಂಗ್ ಆಗಿದ್ದರು.ಈ ಸುಳಿವಿನ ಮೇರೆಗೆ ಕಾರ್ಯಾಚರಣೆ ಇಳಿದ ಸಿಬ್ಬಂದಿಗಳು, ವೃದ್ದೆಯ ಶವವನ್ನ ಪತ್ತೆ ಹಚ್ಚಿದ್ದಾರೆ...

Post a Comment

Previous Post Next Post