ಹೊಸಗರ :12ನೇ ಶತಮಾನದಲ್ಲಿ,ಸಮಾಜದಲ್ಲಿ ನೆಡೆಯುತ್ತಿದ್ದ ಅಸಮಾನತೆ, ಅಸ್ಪೃಶ್ಯತೆ ವಿರುದ್ಧ ಸೆಟೆದು ನಿಂತು, ಕಾಯಕವೇ ಕೈಲಾಸ, ಇಷ್ಟ ಲಿಂಗದ ಸ್ಮರಣೆಯೇ ದೇವನೊಲಿಸುವ ಪರಿ. ದಯವೇ ನಿಜವಾದ ಧರ್ಮವೆಂದು ಜಗತ್ತಿದೆ ತಮ್ಮ ವಚನಗಳ ಮುಖಾಂತರ ಭಕ್ತಿ ಮಾರ್ಗವನ್ನ ಜನ ಸಾಮಾನ್ಯರಿಗೆ ಜನರ ಆಡು ಮಾತಲ್ಲೇ ಪರಿಚಯ ಮಾಡಿ ಸಮಾನತೆ, ಕಾಯಕ, ದಾಸೋಹ ಪರಿಕಲ್ಪನೆ ನೀಡಿ, " ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ " ಎಂದು ಸಾರಿದವರು ವಿಶ್ವಗುರು ಬಸವಣ್ಣ...
ಬಸವಣ್ಣ ನವರು ತಮ್ಮ ಸಾಹಿತ್ಯದ ಮೂಲಕ ಸಾಮಾಜಿಕ ಜಾಗೃತಿಯನ್ನು ಹರಡಿದ ಮೊದಲಿಗರು,ಕೂಡಲಸಂಗಮದೇವ ಎಂಬ ಅಂಕಿತದೊಂದಿಗೆ ಅವರ ಮಾತುಗಳೇ ವಚನಗಳಾದವು..
ಬಸವಣ್ಣನವರ 889 ನೇ ಜನ್ಮದಿನದ ಅಂಗವಾಗಿ ಇಂದು ಹೊಸನಗರ ತಾಲೂಕು ಮೂಲೆಗದ್ದೆಯ ಸದಾನಂದ ಶಿವಯೋಗ ಆಶ್ರಮದಲ್ಲಿ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮ ಹಾಗೂ ಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಶಿಯೋಗಿಗಳ ಪುಣ್ಯಸ್ಮರಣೆ ಕಾರ್ಯಕ್ರಮ ಬಹು ವಿಜೃಂಭಣೆಯಿಂದ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆನಂದಪುರಂ ಮುರುಘ ಮಠದ ಪೂಜ್ಯ ಡಾ|ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು,ಪೂಜ್ಯ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳೊಂದಿಗೆ ಬಸವಣ್ಣನವರ ಪುತ್ಥಳಿ ಅನಾವರಣ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕ ಮುಖಂಡರಾದ, ಕಲಗೋಡು ರತ್ನಾಕರ್, ಬಿ ಜಿ ಚಂದ್ರಮೌಳಿ, ದೇವಾನಂದ್,ಜಯಶೀಲಪ್ಪ ಗೌಡ,ಪಿಎಸ್ಐ ರಾಜೇಂದ್ರ ನಾಯ್ಕ್ ಹಲವಾರು ಮಂದಿ ಉಪಸ್ಥಿತರಿದ್ದರು.