ತೀರ್ಥಹಳ್ಳಿ :ಶಿಕಾರಿಗಾರರ ಗುಂಡಿನ ಏಟಿಗೆ ಬಲಿಯಾದರೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು??

ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು,ಅರಳಸುರಳಿಯ ನೊಣಬೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಕಾಂತೇಶ್,ಬೇಟೆಗಾರರ ಗುಂಡಿಗೆ ಬಲಿಯಾದ ಘಟನೆ ನೆಡಿದಿದ್ದು ಮತ್ತೆ ಮಲೆನಾಡ ಅಡವಿಯಲ್ಲಿ ಬಂದೂಕಿನ ಸದ್ದು ಮಾರ್ಧನಿಸಿದೆ.

ನೊಣಬೂರು ಕಾಡಿನಲ್ಲಿ ಶಿಕಾರಿಗಾಗಿ ಬಂದಿದ್ದ 12 ಜನರ ಗುಂಪಿನ  ಅಚಾನಕ್ಕಾಗಿ ನುಗ್ಗಿದ ಗುಂಡು ಕಾಂತೇಶ್ ಅವರ ಪ್ರಾಣವನ್ನು ತಗೆದಿದ್ದು ಎನ್ನಲಾಗಿದ್ದು ಸ್ಪಷ್ಟ ಮಾಹಿತಿ ತನಿಖೆ ನಂತವಷ್ಟೇ ಬರಬೇಕಿದೆ.ತಾಲೂಕಿನ ಜೆಸಿ ಆಸ್ಪತ್ರೆಗೆ ಕಾಂತೇಶ್ ಅವರನ್ನ ದಾಖಲಿಸಿದ್ದು, ರಿಪ್ಪನ್ ಪೇಟೆ ಹೆದ್ದಾರಿಪುರ ಕಾರ್ಯಕ್ರಮ ನಿಮಿತ್ತ, ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ಬಂದ ಕೆಲಕ್ಷಣದಲ್ಲೇ ಆಸ್ಪತ್ರೆ ಭೇಟಿ ನೀಡಿ, ಪರಿಶೀಲನೆ ನೆಡೆಸಿದರು.

ಪ್ರಕರಣ  ಸಂಬಂದಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ಹಾಗೂ ,ಚಿತ್ರೀಕರಣವನ್ನ ನಿರ್ಬಂಧಿಸಿದ್ದು ಹೆಚ್ಚಿನ ಮಾಹಿತಿ ಬರಬೇಕಿದೆ....
ಗುಂಡು ಸಿಡಿಸಿದ ವ್ಯಕ್ತಿ ಯಾರು,ಏಕೆ ಹೇಗೆ ಎನ್ನುವ ಮಾಹಿತಿ ಬಹಿರಂಗವಾಗಬೇಕಿದೆ..

Post a Comment

Previous Post Next Post