ಶಿವಮೊಗ್ಗ :ಶರಣ್ಯ ಸಂಸ್ಥೆಗೆ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ, ಮಂಜಮ್ಮ ಜೋಗತಿ ಭೇಟಿ!!!

ಶಿವಮೊಗ್ಗ ಜಿಲ್ಲೆ ಗಾಜನೂರು ಅಗ್ರಹಾರ ಗ್ರಾಮದ ರಾಜ್ಯದ ಮತ್ತು ರಾಷ್ಟ್ರದ ಯಾವುದೇ ಯಾವುದೇ ವ್ಯಕ್ತಿಗಳಿಗೆ ಸೇವಾಕ್ಷೇತ್ರ ಮಾನವೀಯ ಸೇವೆ ಯಾವುದೇ ಚಿಕಿತ್ಸೆಯಿಂದ ಗುಣಪಡಿಸಲಾರದ ಉಲ್ಬಣ ಸ್ಥಿತಿಯಲ್ಲಿರುವ ರೋಗಿಗಳಿಗೆ ಒಳ ರೋಗಿಗಳಾಗಿ ಮತ್ತು ಗೃಹ ಶುಶ್ರೂಷಕಿಯಾಗಿ ಸೇವೆ ಪಾಲಕರಿಲ್ಲದ ಮಕ್ಕಳಿಗೆ ಆಶ್ರಯ ಹಿರಿಯ ನಾಗರೀಕರ ಯೋಗಕ್ಷೇಮ ಅಸಹಾಯಕ ಸ್ತ್ರೀಯರಿಗೆ ಆಶ್ರಯ ಸೇವೆಯ ಸೌಲಭ್ಯ ಎಲ್ಲಾ ರೀತಿಯ ಅಸಹಾಯಕ ವೃತ್ತಿಗಳಿಗೆ ಯಾವುದೇ ಜಾತಿ ಮತ ಭೇದವಿಲ್ಲದೆ ಯಾವುದೇ ಫಲಾಪೇಕ್ಷೆ ಇಲ್ಲದೆ ಉಚಿತವಾಗಿ ಕಳೆದ ಹದಿನೇಳು ವರ್ಷಗಳಿಂದ ಆರೈಕೆಯ ಆಶ್ರಯ ಮತ್ತು ಆಧ್ಯಾತ್ಮಿಕತೆ ನೀಡಿ ಧೈರ್ಯ ಮತ್ತು ಆತ್ಮ ಆತ್ಮಸ್ಥೈರ್ಯ ತುಂಬುವ ಮಾನವೀಯ ಸೇವೆಯನ್ನು ನಡೆಸಿಕೊಂಡು ಬರಲಾಗುತ್ತಿರುವ ಶರಣ್ಯ ಸಂಸ್ಥೆಗೆ,
ತಮ್ಮದೇ ಆದ ಸಾಮಾಜಿಕ ಸೇವೆಗಳಿಂದ ಕನ್ನಡಿಗ ಮನ ಗೆದ್ದ ಜನಪದ ಕಲಾವಿದೆ ಪದ್ಮಶ್ರೀ ಜೋಗತಿ ಮಂಜಮ್ಮ,ಹಾಗೂ
ವೃಕ್ಷಮಾತೆ ತುಳಸಿ ಗೌಡ  ಭೇಟಿ ನೀಡಿ ಇಲ್ಲಿನ ಕ್ಯಾನ್ಸರ್ ರೋಗಿಗಳಿಗೆ ಮತ್ತು ಇನ್ನಿತರ ಮಾರಣಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ಹಾಗೂ ವಿಶೇಷ ಸೇವೆ ನೀಡುತ್ತಿರುವ ಶರಣ್ಯ ಸಂಸ್ಥೆಯ ಕಾರ್ಯವೈಖರಿ ನೋಡಿ ಪ್ರಶಂಸಿಸಿ ಈ ಸಂಸ್ಥೆಗೆ ಶುಭವಾಗಲಿ ಎಂದು ಹಾರೈಸಿದರು.


Post a Comment

Previous Post Next Post