ಹೊಸನಗರ : ಸಂಘಟನೆಯಿಂದ ಮಾತ್ರ ಸಾಧ್ಯ ಪಕ್ಷ ಬಲವರ್ಧನೆ ಮಂಜುನಾಥ್ ಚಳ್ಳಕೆರೆ ಹೇಳಿಕೆ

ಹೊಸನಗರ : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಪಟ್ಟಣದ ರಿಪ್ಪಿನ್ ಪೇಟೆಯ ಇಲ್ಲಿನ ಸತ್ಕಾರ ಸಭಾಂಗಣದಲ್ಲಿ  ಯುವ ಮೋರ್ಚಾ ತಾಲೂಕು ಕಾರ್ಯಕಾರಣಿ ಸಭೆ ನಡೆಯಿತು. ತಾಲೂಕು ಮಟ್ಟದ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ಘಟಕದ ಕಾರ್ಯಕಾರಣಿ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಮಂಜುನಾಥ್ ಚಳ್ಳಕೆರೆ ಮಾತನಾಡಿ ಸಂಘಟನಾ ಶಕ್ತಿಯಿಂದ ಮಾತ್ರ ಪಕ್ಷದ ಬಲವರ್ಧನೆ ಸಾಧ್ಯ, ಈ ನಿಟ್ಟಿನಲ್ಲಿ ಯುವ ಮೋರ್ಚಾ ಘಟಕದ ಕಾರ್ಯ ಶ್ಲಾಘನೀಯವಾದುದು. ಹೆಚ್ಚಿನ ಪ್ರಮಾಣದಲ್ಲಿ ಯುವಶಕ್ತಿ  ನಮ್ಮ ಜೊತೆ ಸೇರಿಕೊಂಡಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಗಳಿಸುತ್ತೇವೆ ಎಂದರು.

 ಸಭೆಯಲ್ಲಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ  ನಿತಿನ್ ನಗರ, ಪ್ರಧಾನ ಕಾರ್ಯದರ್ಶಿ ಸಂತೋಷ್ ಮಂಡ್ರಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಹರಿಕೃಷ್ಣ, ರಾಜ್ಯ ಸದಸ್ಯ ಅನೂಪ್, ತಾಲೂಕು ಪದಾಧಿಕಾರಿಗಳಾದ ಕೇಶವ, ಆನಂದ ಮೆಣಸೆ ಪವನ್,, ಪ್ರಕಾಶ್ ದೀಕ್ಷಿತ್ ಇತರರು ಉಪಸ್ಥಿತರಿದ್ದರು.

Post a Comment

Previous Post Next Post