ಹೊಸನಗರ: ಶಾಸಕ ಹರತಾಳು ಹಾಲಪ್ಪನವರು ಮರಳುಲಾರಿ ಮಾಲೀಕರಿಂದ ಹಣ ಪಡೆದಿದ್ದಾರೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ನಾನು ಸಿದ್ಧ, ಯಾವುದೇ ದೇವಾಲಯಕ್ಕೆ ನಾನು ಸಹ ಬರಲು ಸಿದ್ದನಿದ್ದೇನೆ
ತಾಕತ್ತಿದ್ದರೆ ಹಾಲಪ್ಪನವರು ಒಂದು ಬಿಡಿಗಾಸು ಪಡೆದಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಹೊಸನಗರ ಸಾಗರ ಕ್ಷೇತ್ರದ ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಪತ್ರಿಕಾಗೋಷ್ಠಿಯಲ್ಲಿ ಗುಡುಗಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಗೋಪಾಲಕೃಷ್ಣ, ನಿನ್ನೆ ನನ್ನ ಹೇಳಿಕೆಗೆ ಅನುಗುಣವಾಗಿ ಲಾರಿ ಮಾಲೀಕರೆಲ್ಲ ಸೇರಿ ಪತ್ರಿಕಾ ಹೇಳಿಕೆ ನೀಡಿದ್ದರು.ನಾನು ಅವರ ಸವಾಲನ್ನ ಸ್ವೀಕರಿಸಿದ್ದೇನೆ.
"ಲಾರಿ ಮಾಲೀಕರನ್ನು ತಮ್ಮ ಮನೆಗೆ ಕರೆಸಿ ನನ್ನ ವಿರುದ್ಧ ಪತ್ರಿಕಾ ಹೇಳಿಕೆ ನೀಡದಿದ್ದರೇ ನಿಮಗೆ ಆಕ್ರಮವಾಗಿ ಮರಳು ಸಾಗಾಟಕ್ಕೆ ಅನುಮತಿ ಇಲ್ಲಾ ಎಂದು ತಾಕೀತು ಮಾಡಿದ್ದಾರೆ ಹಾಗಾಗಿ ಶಾಸಕರಿಗೆ ಹೆದರಿ ಆಕ್ರಮ ಮರುಳು ದಂಧೆ ಮಾಡುವವರೇ, ಇಂದು ನನ್ನ ವಿರುದ್ಧ ಪತ್ರಿಕಾ ಹೇಳಿಕೆ ನೀಡುತ್ತಿದ್ದಾರೆ ಅವರಿವವರ ಮೂಲಕ ಹೇಳಿಕೆ ನೀಡಿಸುವುದರ ಬದಲು ನಾನು ಸಿಗಂದೂರು ದೇವಸ್ಥಾನ ಹೊರತು ಪಡಿಸಿ, ಯಾವ ದೇವಸ್ಥಾನದಲ್ಲಿ ಬರಲು ಸಿದ್ದ ಲಾರಿ ಹಾಲಪ್ಪನವರು ಲಾರಿ ಮಾಲೀಕರಿಂದ ಕಮೀಷನ್ ಪಡೆದಿದ್ದಾರೆ ಎಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದರು...
ಮೆಸ್ಕಾಂ ವಿರುದ್ಧ ಹೋರಾಟದ ಎಚ್ಚರಿಕೆ...
ಶರಾವತಿ ಹಿನ್ನಿರ ಪ್ರದೇಶಗಳಲ್ಲಿ ಸಾಕಷ್ಟು ಮಳೆಯಾಗಿದ್ದರು ಸಹ ಡಿಸೇಂಬರ್ ತಿಂಗಳಲ್ಲಿ ವಿದ್ಯುತ್ ಸಮಸ್ಯೆ ಉಲ್ಬಣವಾಗಿದೆ.ಶರಾವತಿ ಸೇತುವೆ ನಿರ್ಮಾಣ ಕಾಮಗಾರಿ ಸಲುವಾಗಿ ನೀರಿನ ಮಟ್ಟ ಸಹ ಕುಸಿದಿದೆ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಕ್ಷೇತ್ರದ ಶಾಸಕರಿಗೆ, ಕಾಳಜಿ ಇಲ್ಲವಾಗಿದೆ ವಿದ್ಯುತ್ ಸಮಸ್ಯೆಯಿಂದ ಹಳ್ಳಿಯ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ, ಹೀಗೆ ಮುಂದುವರೆದರೆ ಮೆಸ್ಕಾಂ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷರಾದ ಬಿ ಜಿ ನಾಗರಾಜ್, ಜಯಶೀಲಾಪ್ಪ ಗೌಡ, ಚಂದ್ರಮೌಳಿ ಗೌಡ, ಅಶ್ವಿನಿ ಕುಮಾರ್,ಎರಗಿ ಉಮೇಶ್ ಮತ್ತಿತರರು ಇದ್ದರು