ಹೊಸನಗರ : ಶಾಸಕ ಹಾಲಪ್ಪನವರ ನೇತೃತ್ವದಲ್ಲಿ ನೆಡೆದ ತಾಲೂಕು ಮಟ್ಟದ ಪ್ರಗತಿ ಪರಿಶೀಲನ ಸಭೆ,

ಹೊಸನಗರ : ಹೊಸನಗರ ದಲ್ಲಿ ಇಂದು ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ನವರಿಂದ KDP ಸಭೆ ನಡೆಯಿತು, ಹಾಗೂ ಸರ್ಕಾರಿ ಆದೇಶ ಅನ್ವಯ ನಾಮ ನಿರ್ದೇಶನಗೊಂಡ ನೂತನವಾಗಿ KDP ಗೆ ಆಯ್ಕೆಯಾದ ಸದಸ್ಯರಿಗೆ ಶಾಸಕರು ಸಭೆಯಲ್ಲಿ ಸ್ವಾಗತಿಸಿದರು.ಹಾಗೂ ಸದಸ್ಯರು ಏನೆಲ್ಲಾ ಚರ್ಚೆಗಳಳನ್ನು ಮಾಡಬಹುದು ಹಾಗೂ ತಾಲೂಕು ಆಡಳಿತ ಯಾವ ರೀತಿ ಕಾರ್ಯ ಪ್ರವೃತ ಆಗಿರಬೇಕು ಎಂದು ವಿವರಿಸಿದರು. ಹಾಗೂಸಭೆಯಲ್ಲಿ ತಾಲೂಕಿನ ವಿದ್ಯುತ್ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು ಹಾಗೂ ಬಗರು ಹುಕುಂ ಸಮಸ್ಯೆ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು ಹಾಗೂ ತಾಲ್ಲೂಕಿನ ವಿದ್ಯುತ್ ಸಂಪರ್ಕ, ರಸ್ತೆ, ನೀರಾವರಿ ಇನ್ನಿತರ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಲಾಯಿತು.

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಹೊಸನಗರ ತಾಲೂಕು ಮಟ್ಟದ ಕೆಡಿಪಿ ಸಾಮಾನ್ಯ ಸಭೆಗೆ ಸಾಮಾನ್ಯ ಹಾಗೂ ಹಿಂದುಳಿದ, ಅಲ್ಪಸಂಖ್ಯಾತ ಕೋಟದಡಿ ಸದಸ್ಯರನ್ನ ಕೂಡಲೇ ಜಾರಿಗೆ ಬರುವಂತೆ ಸರ್ಕಾರ ಆದೇಶ ನೀಡಿದೆ. ಸದರಿ ಆಯ್ಕೆಯಾದ ಸರ್ವ ಸದಸ್ಯರಿಗೆ ಶಾಸಕರು ಅಭಿನಂದನೆಗಳನ್ನು ಸಲ್ಲಿಸಿದರು.


ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರಾದ ಹರತಾಳು ಹಾಲಪ್ಪ, ನೂತನ ಸದಸ್ಯರಾದ ನಾಗಾರ್ಜುನ ಸ್ವಾಮಿ, ಶಾಬುದ್ದೀನ್, ನಾಗೇಂದ್ರಪ್ಪ, ರಮೇಶ್, ಪವಿತ್ರ, K V ಸುಬ್ರಹ್ಮಣ್ಯ, ಹಾಗೂ ತಾಲ್ಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು

Post a Comment

Previous Post Next Post