ಹೊಸನಗರ :ರಾಜ್ಯ ಮಟ್ಟದ ಪ್ರತಿಷ್ಟಿತ ಪಂದ್ಯಾಟದಲ್ಲಿ ಪ್ರಶಸ್ತಿ ಮುಡಿಗೇರಿಸಿದ ಹೊಸನಗರ ಬ್ರದರ್ಸ್ ತಂಡ!!!!

ಸಾಗರ :ಸಾಗರ ಫ್ರೆಂಡ್ಸ್ ಟ್ರೋಫಿ 2021,ಸಾಗರದಲ್ಲಿ ನೆಡೆದ ರಾಜ್ಯ ಮಟ್ಟದ ಮುಕ್ತ ಟೆನ್ನಿಸ್ ಕ್ರಿಕೆಟ್ ಪಂದ್ಯದಲ್ಲಿ ರಾಜ್ಯದ ಅಗ್ರಗಣ್ಯ ತಂಡಗಳು ಭಾಗವಸಿದ್ದು ಹೊಸನಗರ ತಂಡ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದು.

ತೀವ್ರ ಕುತೂಹಲ ಕೆರಳಿಸಿದ್ದ ಫೈನಲ್ ಪಂದ್ಯಾಟ ಹಣಾಹಣಿಯಲ್ಲಿ ನಾಶ್ ಬೆಂಗಳೂರು ತಂಡವನ್ನು ಸೋಲಿಸಿ 150000 ನಗದು ಹಾಗೂ ಆಕರ್ಷಕ ಟ್ರೋಫಿಯನ್ನ ಹೊಸನಗರ ಬ್ರದರ್ಸ್ ತಂಡ ತನ್ನ ಮುಡಿಗೇರಿಸಿಕೊಂಡಿದೆ.ನಾಶ್  ಬೆಂಗಳೂರು ತಂಡ ನಿಗದಿತ 4 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದ್ದು  ಈ ಗುರಿಯನ್ನು ಬೆನ್ನತ್ತಿದ ಹೊಸನಗರ ಬ್ರದರ್ ತಂಡ ಒಂದು ಎಸೆತ ಬಾಕಿ ಇರುವಂತೆಯೆ  8 ವಿಕೆಟ್ಗಳ ಭರ್ಜರಿ ಜಯಗಳಿಸಿ ಪ್ರಶಸ್ತಿಯನ್ನ ಜಯಿಸುವಲ್ಲಿ ಯಶಸ್ವಿಯಾಗಿದೆ...

ನಿನ್ನೆಯ ಪಂದ್ಯದಲ್ಲಿ ಹೊಸನಗರ ತಾಲೂಕಿನ ಅತ್ಯುತ್ತಮ ಆಟಗಾರನ್ನು ಒಗ್ಗೂಡಿಸಿ ತಂಡ ಕಟ್ಟಿದ್ದೆ ಜಯಕ್ಕೆ ಇನ್ನೊಂದು ಮುಖ್ಯ ಕಾರಣ. ಇಂತಹ ಒಗ್ಗಟ್ಟು ನಮ್ಮಲಿದ್ದರೆ ಎಲ್ಲವೂ ಸಾಧ್ಯ.ಎನ್ನುತ್ತಾರೆ ತಂಡದ ಆಟಗಾರರು.

ತಂಡದ ನಾಯಕ ಶರತ್ ಪ್ರಮುಖ ಆಟಗಾರಾದ ರಾಘವೇಂದ್ರಟೊಪ್ಪಿ. ಶಶಾಂಕ್ ಮಾಂತೇಶ, ರಂಜಿತ್ ನವೀನ್ ಸನತ್ ಅಕ್ಷಯ್ ಆಶಿಕ್ ತಂಡದಲ್ಲಿ ಇದ್ದರು

ಅವಿನಾಶ್ ಹೊಸನಗರ ಅವರು ಅತ್ಯುತ್ತಮ ಬ್ಯಾಟ್ಸಮನ್ ಪುರಸ್ಕಾರವನ್ನ ಪಡೆದರು.ರಾಜ್ಯ ಮಟ್ಟದಲ್ಲಿ ಪ್ರತಿಷ್ಠಿತ ಟೂರ್ನಿಯಲ್ಲಿ ಹೊಸನಗರ ಆಟಗಾರರ ಈ ಯಶಸ್ಸಿಗೆ ಕ್ರಿಕೆಟ್ ಪ್ರೇಮಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Post a Comment

Previous Post Next Post