ಶಿವಮೊಗ್ಗ :ರಾಷ್ಟ್ರಿಯ ಯುವ ಕಾಂಗ್ರೆಸ್ ವಕ್ತಾರರಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಕಾಂಗ್ರೆಸ್ ಯುವ ಮುಖಂಡ ಆದರ್ಶ ಹುಂಚದಕಟ್ಟೆ ಹಾಗೂ ಮಂಗಳೂರಿನ ಸೂರಯ್ಯ ಅಂಜಂ ಸೇರಿದಂತೆ ಒಟ್ಟು 27 ರಾಷ್ಟ್ರಿಯ ವಕ್ತಾರರನ್ನಾಗಿ ನೇಮಿಸಿ ರಾಷ್ಟ್ರಿಯ ಯುವ ಘಟಕದ ಅಧ್ಯಕ್ಷರು ಶ್ರೀನಿವಾಸ್ ಬಿ ವಿ ಅಧಿಕೃತಗೊಳಿಸಿದ್ದಾರೆ.
ಆದರ್ಶ ಹುಂಚದಕಟ್ಟೆ ಇತ್ತೀಚಿಗಷ್ಟೇ ದೆಹಲಿಯಲ್ಲಿ ನೆಡೆದ ರಾಷ್ಟ್ರಿಯ ಮಟ್ಟದ ಕಾಂಗ್ರೆಸ್ ಪಕ್ಷದ "ಯಂಗ್ ಇಂಡಿಯಾ ಬೋಲ್" ಕಾರ್ಯಕ್ರಮದಲ್ಲೂ ಭಾಗವಹಿಸಿ ರಾಷ್ಟ್ರಿಯ ನಾಯಕರ ಗಮನ ಸೆಳೆದಿದ್ದರು ಮತ್ತು ಸರ್ಕಾರದ ವಿರುದ್ದ ಛಾಟಿ ಬೀಸಿ ಸೈ ಎನಿಸಿದ್ದರು.
ಹಾಗೂ ಬಿಜೆಪಿ ನೇತೃತ್ವದ ಆಡಳಿತ ಪಕ್ಷದ , APMC ಕಾಯ್ದೆ ತಿದ್ದುಪಡಿಯ ವಿರೋಧಿ ಹೋರಾಟಗಳಲ್ಲಿ ಮುಂಚೂಣಿಯಾಗಿ,ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿ ಕಾಂಗ್ರೆಸ್ ನಿಲುಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸುತ್ತ ಆದರ್ಶ, ವಕ್ತಾರರಾಗಿ ಆಯ್ಕೆಯಾಗಿರುದಕ್ಕೆ ತಾಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು ಅಭಿನಂದನೆಗಳನ್ನ ಸಲ್ಲಿಸಿದ್ದಾರೆ.
Tags:
ಶಿವಮೊಗ್ಗ