ಶಿವಮೊಗ್ಗ : ಪರಿಷತ್ ಫಲಿತಾಂಶ ಬಿಜೆಪಿ ಅಭ್ಯರ್ಥಿ ಡಿ ಎಸ್ ಅರುಣ್ ಭರ್ಜರಿ ಜಯಭೇರಿ!!!

ಶಿವಮೊಗ್ಗ : ರಾಜ್ಯ ನಾಯಕರ ಪ್ರತಿಷ್ಠೆಯ ರಣ ಕಣವಾಗಿದ್ದ ಪರಿಷತ್ ಚುನಾವಣೆ ಸ್ಥಳೀಯ ಸಂಸ್ಥೆಗಳ ಮೂಲಕ ರಾಜ್ಯ ವಿಧಾನಪರಿಷತ್ತಿಗೆ ಸದಸ್ಯರನ್ನ ಆಯ್ಕೆಗೆ ಡಿಸೆಂಬರ್ 10ರಂದು ರಾಜ್ಯದೆಲ್ಲೆಡೆ ಚುನಾವಣೆ ನಡೆದಿತ್ತು. ಅದರಂತೆ ಶಿವಮೊಗ್ಗದಲ್ಲೂ ಸಹ ಕಾಂಗ್ರೆಸ್ ಮತ್ತು ಬಿಜೆಪಿಗೆ  ನೇರಾನೇರಾ ಸ್ಪರ್ಧೆ ಏರ್ಪಟ್ಟಿತ್ತು, ಬಹಳ ಕುತೂಹಲ ಕೆರಳಿಸಿದ್ದ ಪರಿಷತ್ ಅಖಾಡ ಕಾಂಗ್ರೆಸ್ ನಿಂದ ಹಾಲಿ ವಿಧಾನ ಪರಿಷತ್ ಸದಸ್ಯರಾದ ಆರ್‌ ಪ್ರಸನ್ನಕುಮಾರ್ ಮತ್ತೊಮ್ಮೆ ಆಯ್ಕೆ ಬಯಸಿದ್ದರು.ಪ್ರತಿಸ್ಪರ್ದಿ ವಿಧಾನಪರಿಷತ್ ಮಾಜಿ ಸಭಾಪತಿಗಳಾದ ಡಿ.ಎಚ್ ಶಂಕರಮೂರ್ತಿಯವರ ಪುತ್ರ ಡಿ.ಎಸ್. ಅರುಣ್ ಸ್ಪರ್ಧೆ ಮಾಡಿದ್ದರು.ಡಿ ಎಸ್ ಅರುಣ್ ಮೊದಲ ಯತ್ನದಲ್ಲೇ ಪರಿಷತ್ ಪ್ರವೇಶ ಪಡೆದಿದ್ದಾರೆ.

ಅಭ್ಯರ್ಥಿಗಳು ಪಡೆದ ಮತಗಳು ಹಾಗೂ ಅಂತರ ಮಾಹಿತಿ ಇನ್ನಷ್ಟೇ ಬರಬೇಕಿದೆ. ಅಧಿಕೃತ ಘೋಷಣೆ ಒಂದೇ ಬಾಕಿ ಇದೆ..


ಚಲಾವಣೆಯಾದ ಮತಗಳು :4156

ತಿರಸ್ಕ್ರತ ಮತ                      : 109


ಶಿವಮೊಗ್ಗ ಜಿಲ್ಲಾ  ಬಿಜೆಪಿ ಕಚೇರಿ ಎದುರು ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ....

ಸೊರಬ ಶಾಸಕರು ಕುಮಾರ ಬಂಗಾರಪ್ಪ, ಸಂಸದರು ಬಿ ವೈ ರಾಘವೇಂದ್ರ  ಹರತಾಳು ಹಾಲಪ್ಪ ಹಾಗೂ  ಪಂಚಾಯತ್  ಜನಪ್ರತಿನಿಧಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.      


Post a Comment

Previous Post Next Post