ಶಿವಮೊಗ್ಗ : ಯುವಕರ ಸಮಾಜಮುಖಿ ಕಾರ್ಯಕ್ಕೆ ಸಾಗರ-ಹೊಸನಗರ ಕ್ಷೇತ್ರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮೆಚ್ಚುಗೆ!!

ಶಿವಮೊಗ್ಗ: ಶಿವಮೊಗ್ಗ -ಆನಂದಪುರಂ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ( NH-206 )ತುಪ್ಪುರು ಬಳಿಯ "ಆನೆಮೋರಿ " ತಿರುವಿನಲ್ಲಿ ಹಲವುಬಾರಿ  ಅಪಘಾತ, ಸಂಭವಿಸುತ್ತಿದ್ದವು.ಅಪಘಾತ ವಲಯವಾದ ಈ ತಿರುವಿನಲ್ಲಿ ಸಾಕಷ್ಟು ಜನ ಬಿದ್ದು, ಗಾಡಿಗಳು ಮಗುಚಿ ಬಿದ್ದು, ತೊಂದರೆಗಳು ಆಗಾಗ ಆಗುತ್ತಿದ್ದವು,ಕಾರಣ ತಿರುವಿನ ಅಂಚಿನಲ್ಲಿರುವ ಸಾಕಷ್ಟು ಕಲ್ಲುಪುಡಿ ಇದ್ದು,ಸುಗಮ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗುತ್ತಿತ್ತು.ವಾಹನಗಳು  ವೇಗವಾಗಿ ಬಂದಾಗ, ಜಾರುವ ಪ್ರಸಂಗ ಹೆಚ್ಚಾಗಿದ್ದು ಇದರಿಂದ ಅಪಘಾತಗಳು ಸಹ ಸಂಭವಿಸುತ್ತಿದ್ದವು.ಇದ‌ನ್ನ ಗಮನಿಸಿ ಇಂದು "ತುಪ್ಪೂರಿನ ಸೇವಾ ಯುವಕರ ತಂಡದಿಂದ ಸಂಪೂರ್ಣವಾಗಿ ಕಲ್ಲಿನ ಪುಡಿಗಳನ್ನ ತೆರವು ಗೊಳಿಸಿ, ಹೆದ್ದಾರಿಯನ್ನ ಸ್ವಚ್ಚಗೊಳಿಸಿ ವಾಹನ ಸವಾರರಿಗೆ ಯಾವುದೆ ತೊಂದರೆ ಹಾಗೂ ಪ್ರಾಣಹಾನಿ,ಆಗಬಾರದೆಂಬ ಮುಖ್ಯ ಉದ್ದೇಶದಿಂದ ಸ್ವಚ್ಛತಾ ಕಾರ್ಯವನ್ನು ಮಾಡಲಾಗಿದೆ ಎಂದು ಯುವಕರು ಹೇಳಿದರು. ಇದೆ ಮಾರ್ಗವಾಗಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಾಗರ -ಹೊಸನಗರ ಕ್ಷೇತ್ರದ ಮಾಜಿ ಶಾಸಕ ಹಾಗೂKPCC ವಕ್ತಾರ ಬೇಳೂರು ಗೋಪಾಲ ಕೃಷ್ಣ  ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕಾರ್ತಿಕ್ ಗೌಡ,ಕೃಷ್ಣಮೂರ್ತಿ, ಶಿವು, ಸುದೀಪ್,ಮನೋಜ್,ಉಲ್ಲಾಸ್ ಮತ್ತಿತರರು ಇದ್ದರು 


Post a Comment

Previous Post Next Post