ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಬಳಸುವ ಮೊದಲು ಎಚ್ಚರ:ವಿಜಯಾ

ರಿಪ್ಪನ್ ಪೇಟೆ : ಹಸಿರು ಸೊಪ್ಪು ತರಕಾರಿ ಬಳಸುವುದು ನಮ್ಮೆಲ್ಲರ ಆದ್ಯಕರ್ತವ್ಯ,ಜಕ್ ಫುಡ್ ಗಳಿಂದ ದೂರವಿರುವುದು ಅತ್ಯವಶ್ಯಕ,ಮೊಳಕೆ ಯುಕ್ತ ಆಹಾರ ಪ್ರತಿದಿನ ಸೇವಿಸಬೇಕು.ತಮ್ಮ ಹಿತ್ತಲು ಪ್ರದೇಶಗಳಲ್ಲಿರುವ ಆಹಾರ ಪದಾರ್ಥಗಳಲ್ಲಿ ರೋಗನಿರೋಧಕ ಶಕ್ತಿ ಅಡಗಿರುತ್ತದೆ ಅದನ್ನು ಸೂಕ್ತ ರೀತಿಯಲ್ಲಿ ಬಳಸಿ ಎಂದು ಹೊಸನಗರ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶ್ರೀಮತಿ ವಿಜಯ ಹೇಳಿದರು.

ಬಾಳೂರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಸಾಯನಿಕವಾಗಿ ಬಳಸಿದ ಆಹಾರ ಪದಾರ್ಥಗಳಿಂದ ದೂರವಿರುವುದು ಅಗತ್ಯ ಇದರಿಂದ ಮುಂದಿನ ದಿನಗಳಲ್ಲಿ ಆರೋಗ್ಯವಂತ ಜೀವನ ನಡೆಸಲು ಸಾಧ್ಯ. ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಆರೋಗ್ಯದಿಂದ ಇದ್ದರು, ಆದರೆ ಇದೀಗ ಅವಿಭಕ್ತ ಕುಟುಂಬ ದೂರವಾಗಿ ವಿಭಕ್ತ ಕುಟುಂಬಗಳು ಹೆಚ್ಚಾಗಿದ್ದು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಇದಕ್ಕೆ ಕಾರಣ ಪೌಷ್ಟಿಕಾಂಶಗಳ ಕೊರತೆ ಎದ್ದುಕಾಣುತ್ತಿದೆ,ಯಾವುದೇ ಆಹಾರಗಳನ್ನು ಬಳಸುವಾಗ ಆಹಾರ ಪದಾರ್ಥಗಳನ್ನು ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಬಳಸಬಾರದು, ದೇಹಕ್ಕೆ ಸಮತೋಲನ ಆಹಾರ ಅತೀ ಅಗತ್ಯ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ,ಪಂ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಸಿರಿ ಧಾನ್ಯಗಳಾದ ನವಣೆ,ಸಾಮೆ, ಅರ್ಕಾ,ಊದಲು,ಕೊರ್ಲೆ ಇವುಗಳ ಬಗ್ಗೆ ಶ್ರೀಮತಿ ರೇಖಾರವರು ಅತ್ಯುತ್ತಮ ಮಾಹಿತಿ ನೀಡಿದರು.  ಗರ್ಭಿಣಿ ಮಹಿಳೆಯರಿಗೆ  ಉಡಿ ತುಂಬಲಾಯಿತು ಹಾಗೂ ಗ್ರಾಮದ ಮಹಿಳೆಯರು ವಿವಿಧ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ  ಬಗೆಯ ಖಾದ್ಯಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಡಲಾಯಿತು.ನಂತರ ಆಯ್ದ ಮಹಿಳೆಯರಿಗೆ ಬಹುಮಾನ ನೀಡಲಾಯಿತು.ಈ ಕಾರ್ಯಕ್ರಮದಲ್ಲಿ  ಗ್ರಾ,ಪಂ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್, ಮಹಿಳಾಮತ್ತುಮಕ್ಕಳಅಭಿವೃದ್ಧಿಇಲಾಖೆ ಮೇಲ್ವಿಚಾರಕಿ ವೀರಮ್ಮ,ಕಿರಿಯ ಆರೋಗ್ಯ ಸಹಾಯಕಿ ಪದ್ಮಾವತಿ,

ರೇಖಾ ಬಸವರಾಜ್,ರಾಜುಗೌಡ ಹಾಲುಗುಡ್ಡೆ, ಶಿಕ್ಷಕರುಗಳಾದ ಈಶ್ವರಪ್ಪ, ನಾಗಭೂಷಣ ಆರ್,

ಅಂಗನವಾಡಿ ಕಾರ್ಯಕರ್ತೆಯರಾದಜ ತಾಲೂಕಿನ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಲೀಲಾವತಿ,ವನಜಾ, ಆಶಾ,ರಮ್ಯಾ,ಸುಧಾ,ಯಮುನಾ ರೇಣುಕಾ ಕುಲಕರ್ಣಿ ಹಾಗೂ ಅಂಗನವಾಡಿ ಸಹಾಯಕಿಯರು ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು

ಈ ಕಾರ್ಯಕ್ರಮವನ್ನು ಅಂ,ಕಾ ಸವಿತ ಭಂಡಾರಿ  ಸ್ವಾಗತಿಸಿ, ರೇಖಾ ಹಾಲುಗಡ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು.

Post a Comment

Previous Post Next Post