ಹೊಸನಗರ :ನಾಡಿನೆಲ್ಲೆಡೆ ಸಡಗರ ಸಂಭ್ರಮದ ಗಣೇಶ ಚತುರ್ಥಿಯನ್ನ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಹೊಸನಗರ ಹೆಬ್ಬಾಗಿಲು ಹೊಸನಗರ ತಾಲೂಕಿನ ಎಲ್ಲೆಡೆ ಸಂಭ್ರಮ ಮನೆ ಮಾಡಿದ್ದೂ, ತಾಲೂಕಿನ ಸರ್ಕಾರಿ ಶಾಲೆ ಹಾಗೂ,ಊರಿನ ಮುಖ್ಯ ರಸ್ತೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿ ಎಂದಿನಂತೆ ಸಾರ್ವಜನಿಕರು ಭಾಗವಹಿಸಿ,ವಿಘ್ನ ನಿವಾರಕನ ದರ್ಶನ ಪಡೆಯುತ್ತಿದ್ದಾರೆ..
ತಾಲೂಕಿನ ಮೂಲೆಗದ್ದೆ ಶ್ರೀ ಮಠ ಸದಾನಂದ ಶಿವಯೋಗ ಆಶ್ರಮದಲ್ಲಿ ಸಹ ಪೂಜ್ಯ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಗಣಪತಿ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು.... ಅಭಿನವ ಚನ್ನಬಸವ ಸ್ವಾಮೀಜಿ ಅವರು ಮಲೆನಾಡಿನ ಸಮಸ್ತ ಸಾರ್ವಜನಿಕರಿಗೆ ಈ ಭಾದ್ರಪದ ಶುಕ್ಲ ಚೌತಿಯ ಶುಭ ದಿನದಂದು ಮನೆ ಮನೆಗೂ ಗಣೇಶ ಸಂತಸದಿನ ಬಂದು ಕಷ್ಟ -ಕಾರ್ಪಣ್ಯ ನೀಗಿ ವಿಘ್ನಗಳು ದೂರಾಗಿ,ನೆಮ್ಮದಿ ಬದುಕು ಲಭಿಸಲಿ ಎಂದು ಶುಭಾಶಯಗಳನ್ನ ಕೋರಿದ್ದಾರೆ...
ಭಕ್ತಾದಿಗಳ ಸಮ್ಮುಖದಲ್ಲಿ ಪೂಜ್ಯ ಶ್ರೀಗಳ ನೇತೃತ್ವದಲ್ಲಿ ಸಂಜೆ ವೇಳೆಗೆ ಗಣೇಶನನ್ನ ವಿಸರ್ಜನೆ ಮಾಡಲಾಯಿತು.....
✍️ಅಜಿತ್ ಗೌಡ ಬಡೇನಕೊಪ್ಪ..