ಬಸ್ಸು - ಕಾರು ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಕಾರು ಚಾಲಕನ ಸೇರಿ,ಇಬ್ಬರ ದಾರುಣ ಸಾವು!!

ಸಾಗರ: ತಾಳಗುಪ್ಪ ಸಮೀಪ ಆಲಳ್ಳಿ ಬಳಿ ಇಂದು  ಸಂಜೆ ಬಸ್ ಮತ್ತು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು!!. ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನೆಡಿದಿದ್ದು..ಮೃತ ಕಾರು ಚಾಲಕ ಚನ್ನಗಿರಿ ಮೂಲದ ಶಹಾಬಾಜ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಉಳಿದವರನ್ನು ರಿಹಾನ್ .ತಬಸ್ಸುಮ್.ಶಿಫಾ.ಖಮರುನ್ನಿಸಾ,ಜಬ್ರುನ್,ಮಹಮ್ಮದ್ ಉಸ್ಮಾನ್.ಎಂದು ತಿಳಿದು ಬಂದಿದೆ.ಎಲ್ಲರೂ ದಾವಣಗೆರೆಯ ಚೆನ್ನಗಿರಿಯ ಒಂದೇ ಕುಟುಂಬದವರು ಎಂದು ಹೇಳಲಾಗುತ್ತಿದೆ...

ತೀವ್ರ ತರಹದ ಗಾಯಗಳಾದವರನ್ನು ಸಾಗರ ಉಪವಿಭಾಗೀಯ ಆಸಾವು ಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು ಇದೀಗ

ಅಪಘಾತದಲ್ಲಿ 13 ವರ್ಷದ ರಿಹಾನ್ ಎಂಬುವ ಗಂಡು ಮಗು ಸಾಗರದಿಂದ ಶಿವಮೊಗ್ಗಕ್ಕೆ ಆಂಬುಲೆನ್ಸ್ ಮೂಲಕ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದು, ಮೃತರ ಸಂಖ್ಯೆ ಎರಡಕ್ಕೆ ಏರಿಕೆ ಆಗಿದೆ.! ಅಪಘಾತದಲ್ಲಿ ಗಂಭೀರಗಾಯಗೊಂಡವರು ಶಿವಮೊಗ್ಗ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜೋಗ ಜಲಪಾತ ವೀಕ್ಷಿಸಿ ವಾಪಸ್ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೋಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.



Post a Comment

Previous Post Next Post