ಹೊಸನಗರ :ಹೊಸನಗರ :ಸಾಗರ ಹೊಸನಗರ ಹೆದ್ದಾರಿಯ ಮಾರುತಿಪುರ ಸಮೀಪ ಕೇಶವಪುರ ಸೇತುವೆ ಬಳಿಯ ತಿರುವಿನಲ್ಲಿ ಗೂಡ್ಸ್ ಆಟೋ ಹಾಗೂ ಮಾರುತಿ ಓಮ್ನಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓಮ್ನಿಚಾಲಕ ತೀವ್ರವಾಗಿ ಗಾಯಗೊಂಡಿದ್ದ ಸತೀಶ್ ಕಾಡವಳ್ಳಿ(52) ನಿನ್ನೆ ರಾತ್ರಿ ಸಾವನಪ್ಪಿರುವ ವರದಿಯಾಗಿದೆ.ಸತೀಶ್ ಕಾಡವಳ್ಳಿ,ಇಬ್ಬರು ಗಂಡು ಮಕ್ಕಳನ್ನ ಬಿಟ್ಟು ಅಗಲಿದ್ದಾರೆ.
ಮೃತರು ತಾಲೂಕು ಕಾಂಗ್ರೆಸ್ ಸೇವಾದಳದ ಅಧ್ಯಕ್ಷರು ಹಾಗೂ ವೀರಶೈವ ಸಮುದಾಯದ ಮುಖಂಡರರಾಗಿಯೂ ಸಹ ಗುರುತಿಸಿಕೊಂಡಿದ್ದರು.
ಅಫಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು,ಓಮಿನಿಯಲ್ಲಿ ಚಾಲಕನೊಬ್ಬನೇ ಪ್ರಯಾಣ ಮಾಡುತ್ತಿದುದ್ದರಿಂದ ಬಹುದೊಡ್ಡ ಅನಾಹುತ ತಪ್ಪಿದಂತಾಗಿದೆ. ಗೂಡ್ಸ್ ಆಟೋದಲ್ಲಿ ಇಬ್ಬರು ಪ್ರಯಾಣಿಸುತಿದ್ದು ಸಣ್ಣ ಪುಟ್ಟ ಗಾಯವಾಗಿರುವ ವರದಿಯಾಗಿದ್ದು ,ಹೊಸನಗರದಿಂದ ಬಟ್ಟೆಮಲಪ್ಪ ಕಡೆಗೆ ಪ್ರಯಾಣಿಸುತ್ತಿದ್ದರು.
ಸತೀಶ್ ಕಾಡವಳ್ಳಿ ಅವರ ಅಕಾಲಿಕ ನಿಧನಕ್ಕೆ ಅಪಾರ ಬಂಧು-ಮಿತ್ರರು, ಹಾಗೂ ಕೊಡಚಾದ್ರಿ ಜೆಸಿಐ ಸದಸ್ಯರು,ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ.