"ಹಿರಿಯರ ಮಾರ್ಗದರ್ಶನ, ಸಂಘಟನಾತ್ಮಕ ಹೋರಾಟ ಹಾಗೂ ಶಾಸಕರ ಕ್ಷೇತ್ರದ ಬಗೆಗಿನ ಆಸಕ್ತಿ,ರಸ್ತೆ ಕೆಲಸ ಕಾಮಗಾರಿ ಪ್ರಾರಂಭವಾಗಿರುತ್ತದೆ,ಸದರಿ ಈ ರಸ್ತೆಯು ಹುಂಚ ಪಂಚಾಯತ್ ಮೂಡಲಿ ಗೆ ಹೋಗುವ ದಾರಿಗೆ ಮುಂಜೂರಾಗಿರುತ್ತದೆ ಈ ರಸ್ತೆ 1.2ಕಿಲೋಮೀಟರ್ ವ್ಯಾಪ್ತಿಯನ್ನು ಒಳ ಪಡುತ್ತದೆ ಇದರಿಂದ, ಆನೆಗದ್ದೆ, ಮೂಡಲಿ, ಹೊಸಗದ್ದೆ, ಕಿಳೆರಿ ಹಾಗೂ ಇನ್ನೂ ಅನೇಕ ಹಳ್ಳಿಗರಿಗೆ ಅನುಕೂಲವಾಗುತ್ತದೆ, ಮೂಡಲಿಯ ಊರಿನ ವರೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಸೇರಿಸಲಾಗಿತ್ತು ಈ ಮಹಾಮಾರಿ ಕರೋನ ಇಂದಾಗಿ ಕಾಮಗಾರಿ ತಡೆ ಆಗಿದ್ದು ಈಗ ಶಾಸಕರ ಅನುದಾನದಲ್ಲಿ 1.2ಕಿಲೋಮೀಟರ್ ರಸ್ತೆ ನೀಡಿರುತ್ತಾರೆ ಹಾಗೂ ಇನ್ನೂ ಬಾಕಿ ಉಳಿದವ ರಸ್ತೆಯನ್ನು ಮುಂದಿನ ದಿನಗಳಲ್ಲಿ ಮಾಡಿಸುತ್ತೇನೆ ಎಂದು ಭರವಸೆ ಕೊಟ್ಟಿರುತ್ತಾರೆ, ಆದರೂ ಕೇವಲ ವಯಕ್ತಿಕ ರಾಜಕೀಯ ದ್ವೇಷದ ಕಾರಣದಿಂದ ಸಾರ್ವಜನಿಕರಿಗೆ ದಾರಿ ತಪ್ಪಿಸುವ ಕೆಲಸ ಪ್ರಾರಂಭ ಮಾಡಿದ ಕಾಂಗ್ರೆಸ್ ಪಕ್ಷದ ನಾಯಕರು ಇಂದು ಪ್ರತಿಭಟನೆ ಮಾಡಿ ಕೆಲಸಕ್ಕೆ ತಡೆ ಮಾಡಿದ್ದು ಕ್ಷಮಿಸಲಾಗದ ಕೃತ್ಯ."
ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸಲಾಗದ ಕಾಂಗ್ರೆಸ್ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಹೊರೆತು ಬೇರೇನೂ ಇಲ್ಲಾ.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಶಾಸಕರು ಇದ್ದಾಗ ಹೊನ್ನೇಬೈಲು ಬೂತ್ ಹಾಗೂ ಹುಂಚ ಪಂಚಾಯತ್ ವ್ಯಾಪ್ತಿಗೆ ಎಷ್ಟು ಅನುದಾನ ತಂದಿರುತ್ತಾರೆ ಹಾಗೂ ಎಷ್ಟು ಕೆಲಸಗಳು ಆಗಿರುತ್ತವೆ ಎಂದು ಸಾರ್ವಜನಿಕರ ಎದುರು ಬರಲು ಮುಖವಿಲ್ಲದೆ ಹೀಗೆಲ್ಲ ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಾಗಬೇಕಿದೆ.
"ಅಭಿವೃದ್ಧಿ ಕೇವಲ ಮಾತಲ್ಲ, ಅದೊಂದು ಸಂಕಲ್ಪ"
ಅಭಿವೃದ್ಧಿ ಪತದಲ್ಲಿ ನಮ್ಮ ಪಂಚಾಯತ್ಅನ್ನು ತೆಗೆದುಕೊಂಡು ಹೋಗುತ್ತಿರುವ ನಮ್ಮ ಹೆಮ್ಮೆಯ ಶಾಸಕರು ಹಾಗೂ ಗೃಹ ಸಚಿವರಿಗೆ ಸಮಸ್ತ ಗ್ರಾಮಸ್ಥರು, ಕಾರ್ಯಕರ್ತರು, ಜಯಕರ್ನಾಟಕ ಸಂಘಟನೆ,ಅಭಿನಂದನೆಗಳನ್ನ ಈ ಮೂಲಕ ತಿಳಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ನಾಗೇಂದ್ರ ಈರನ ಬೈಲು, ಅಭಿಷೇಕ್ ಹುಂಚ, ವಿಶ್ವನಾಥ್ ಹೊನ್ನೇಬೈಲು, ಹರೀಶ್ ಹೊನ್ನೇಬೈಲು, ಚೇತನ್ ಮೂಡಲಿ, ಶಿವಾನಂದ್ ಎಲ್ಲದಕೋಣೆ, ವೀರೇಶ್ ಆನೆಗದ್ದೆ,ಗ್ರಾಮಸ್ಥರಾದ ಜಯಕರ್ನಾಟಕ ತಾಲೂಕಿನ ಅಧ್ಯಕ್ಷರಾದ ಚಂದನ್ ಗೌಡ, ನಂದನ್ ಗೌಡ,ಸುಧೀರ್ ಹಾಗೂ ಇನ್ನಿತರರು ಇದ್ದರು...