ಹೊಸನಗರ :ಹರ್ಷನ ಹತ್ಯೆಗೈದ ಹಂತಕರಿಗೆ ಗಲ್ಲು ಶಿಕ್ಷೆಗೆ ವಿಧಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ!!!

ಹೊಸನಗರ :ಇಡೀ ದೇಶಾದ್ಯಂತ ಸುದ್ದಿಯಾದ ಶಿವಮೊಗ್ಗದ ಹರ್ಷ ಹಿಂದೂ ವನ್ನ ಅಮಾನುಷವಾಗಿ ಹತ್ಯೆಗೈದ ಕೊಲೆಗಡುಕರಿಗೆ ಉಗ್ರ ಶಿಕ್ಷೆ ನೀಡುವಂತೆ  ಒತ್ತಾಯಿಸಿ ಹೊಸನಗರ ತಾಲೂಕು ಹುಂಚ ಹೋಬಳಿಯಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನಾ    ಮೆರವಣಿಗೆ  ನಡೆಸಲಾಯಿತು.ಹರ್ಷ ಅವರನ್ನ ಪೂರ್ವನಿರ್ಧರಿತವಾಗಿ ಯೋಜನೆ ರೂಪಿಸಿ,ಕೊಲೆಗೈದ ಪಾಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು.. ಮುಂದೆ ಇಂತಹ ದುರ್ಘಟನೆಗಳು ಮರುಕಳಿಸದಂತೆ  ಸರ್ಕಾರ ಈ ಕೂಡಲೇ  ಎಚ್ಚೆತ್ತುಕೊಳ್ಳಬೇಕು.  ಹಿಂದೂ ಕಾರ್ಯಕರ್ತರ ಕಗ್ಗೊಲೆಗೆ ಪೂರ್ಣವಿರಾಮ ಇಡಬೇಕು. ಶಾಂತಿ ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಯಾರೇ ಆಗಿರಲಿ ಅವರನ್ನು ಹಿಡಿದು ಜೈಲಿಗಟ್ಟಬೇಕು.ಎಂದು ಪ್ರತಿಭಟನಾ ನಿರತ ಕಾರ್ಯಕರ್ತರು ಆಗ್ರಹಿಸಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಸ್ವಾಮಿರಾವ್ ಮಾತನಾಡಿ ಹಿಂದೂ ವಿರೋಧಿ ದೋರಣೆ ನೀತಿಗಳನ್ನ ನಾವು ಖಂಡಿಸಿ, ದಿಕ್ಕರಿಸಬೇಕು ಎಂದರು. ಇನ್ನೊರ್ವ ಪ್ರತಿಭಟನಾ ನಿರತ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷರಾದ ಗಣಪತಿ ಬೆಳಗೋಡು ಮಾತನಾಡಿ ಕೇವಲ ವೋಟ್ ಬ್ಯಾಂಕ್ ಮಾಡುವ ನಿಟ್ಟಿನಲ್ಲಿ ಓಲೈಕೆಮಾಡುವ ರಾಜಕೀಯವನ್ನ ಜನರು ಎಂದು ಒಪ್ಪುವುದಿಲ್ಲ.ಅಂಥ ರಾಜಕೀಯ ಎಂದೆಂದಿಗೂ ಸಲ್ಲದು ಜನ ಜಾಗೃತರಾಗಿದ್ದಾರೆ ಎಂದರು.

ನಮ್ಮಸಂಘಟನೆಯಲ್ಲಿ ಬಡವ ಬಲ್ಲಿದ ಶ್ರೀಮಂತ ಎನ್ನುವ ತಾರತಮ್ಯ ಭಾವನೆ ಬಂದಿಲ್ಲ,ಕ್ಷುಲ್ಲಕ ಹೇಳಿಕೆಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲವೆಂದು ಯುವ ಮುಖಂಡ ಅಭಿಷೇಕ್ ಹುಂಚ ಕಿಡಿಕಾರಿದರು..

ಮೃತ ಹರ್ಷ ನಿಗೆ ಶ್ರದ್ದಾಂಜಲಿ ಅರ್ಪಿಸಿ ಕೊಲೆಗಡುಕರನ್ನು ನೇಣಿಗೆ ಏರಿಸಲು ಒತ್ತಾಯಿಸಿ ಉಪತಾಶೀಲ್ದಾರ್ ಗೆ ಮನವಿ ನೀಡಲಾಯಿತು.

ಸಭೆಯಲ್ಲಿ ತಾಲೂಕ್ ಬಿಜೆಪಿಯ ಅಧ್ಯಕ್ಷರಾದ ಗಣಪತಿ ಬೆಳಗೋಡು, ಉಪಾಧ್ಯಕ್ಷ ರಾದ ನಾಗೇಂದ್ರ ಕಲ್ಲೂರ್, ಪ್ರಧಾ ನ ಕಾರ್ಯದರ್ಶಿ ಯಾದ ವಿನಾಯಕ ಹುಂಚ,ಪುಂಡಲೀಕ ಬಾಬು ಉಪಸ್ಥಿತರಿದ್ದರು, ಈರನ್ ಬೈಲು ನಾಗೇಂದ್ರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುರೇಶ್ ಸ್ವಾಮಿ ರಾವ್, ಪಕ್ಷದ ಹಿರಿಯರಾದ ಬೆಳ್ಳೂರು ತಿಮ್ಮಣ್ಣ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರರಾದ ಅಶ್ವಥ್ ಮುಗುಡ್ತಿ, ಅಭಿಷೇಕ್ ಹುಂಚ, ಮತ್ತಿತರರು ಹಾಜರಿದ್ದರು

Post a Comment

Previous Post Next Post