ಆನಂದಪುರ : ತಪ್ಪು ಯಾರದ್ದೋ ಶಿಕ್ಷೆ ಯಾರಿಗೊ, ಇದು ಹಾಸ್ಟೆಲ್ ಕರ್ಮಕಾಂಡ

ಆನಂದಪುರ ಹಾಸ್ಟೆಲ್ ನಲ್ಲಿ ಬೆಡ್ ಶೀಟ್ ಮುಚ್ಚಿಟ್ಟಿದ್ದು ವಾರ್ಡನ್ ಆದರೆ ಶಿಕ್ಷೆ ಮಾತ್ರ ಅಡುಗೆ ಸಿಬ್ಬಂದಿಯವರಿಗೆ !!!

 ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಸಿದ್ದೇಶ್ವರ ಕಾಲೊನಿಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಹಾಸ್ಟೆಲ್ ವಾರ್ಡನ್ ಮಮತಾ ವಿದ್ಯಾರ್ಥಿಗಳಿಗೆ ನೀಡಿದ ಮೂವತ್ತು ಕ್ಕೂ ಹೆಚ್ಚು ಬೆಡ್ ಶೀಟ್ ಗಳನ್ನು ಬಚ್ಚಿಟ್ಟಿದ್ದರು.ಇದರಿಂದ ಮನನೊಂದ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಅವ್ಯವಹಾರ ನಡೆದಿದೆಯೆಂದು ಬಂದಂತಹ ಜನಪ್ರತಿನಿಧಿಗಳೆದರು ದೂರಿದ್ದರು ಜನ ಜನಪ್ರತಿನಿಧಿಗಳ ಎದುರು ವಿದ್ಯಾರ್ಥಿಗಳು ಹಾಸ್ಟೆಲ್ ನ ವಾರ್ಡನ್ ಮಮತಾ ವಿರುದ್ಧ ಹಲವು ದೂರುಗಳನ್ನು ನೀಡಿದ್ದರು. ಬೆಡ್ ಶೀಟ್ ಗಳನ್ನು ಕಳೆದ 1ವರ್ಷದಿಂದ ನೀಡಿಲ್ಲ ಹಾಗೂ ಬಕೆಟ್ ಹಾಗೂ ಜಗ್ಗು ಗಳನ್ನು ನೀಡಿಲ್ಲ ಹಾಗೂ ಐವತ್ತು ವಿದ್ಯಾರ್ಥಿಗಳಿಗೆ ಕೇವಲ 1ಲೀಟರ್ ಹಾಲು ತರಿಸಿ ಟಿ ನೀಡುತ್ತಿದ್ದಾರೆ ಹಾಗೂ ಇನ್ನಿತರ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದರು.ಇಂದು ಆನಂದಪುರದ ಹಾಸ್ಟೆಲ್ ಗೆ ಭೇಟಿ ನೀಡಿದ ಹಿಂದುಳಿದ ವರ್ಗಗಳ ಶಿವಮೊಗ್ಗ ಕಲ್ಯಾಣಾಧಿಕಾರಿ ಕುಮಾರ್ ವಿದ್ಯಾರ್ಥಿಗಳ ಮಾತನ್ನು ಕೇಳಿ ತಪ್ಪು ಮಾಡಿದ ವಾರ್ಡನ್ ಮಮತಾ ವಿರುದ್ಧ ಕ್ರಮ ಕೈಗೊಳ್ಳುವ ಬದಲು ತನ್ನಲ್ಲಿ ಕೆಲಸ ಮಾಡುತ್ತಿರುವ ಅಮಾಯಕ ಅಡುಗೆ ಸಿಬ್ಬಂದಿಗಳಿಗೆ ಕ್ರಮ ಕೈಗೊಂಡಿದ್ದಾರೆ.

ವಾ ರ್ಡನ್ ನನ್ನು ಬಿಟ್ಟು ಅಡುಗೆ ಸಿಬ್ಬಂದಿಗಳು ನಾಳೆಯಿಂದ ಸಾಗರದ ಹಾಸ್ಟೆಲ್ ಗೆ ಹೋಗಿ ಇಲ್ಲಿ ನೀವು ಅಡುಗೆ ಮಾಡುವುದು ಬೇಡ ಅಲ್ಲಿನ ಸಿಬ್ಬಂದಿಗಳು ಇಲ್ಲಿಗೆ ಬಂದು ಅಡುಗೆ ಮಾಡುತ್ತಾರೆ ಎಂದು ಮೌಖಿಕವಾಗಿ ಹೇಳಿದ್ದಾರೆ.ಇದು ನಿಜವಾಗಿಯೂ ಅಮಾನವೀಯ ಕುಮಾರ್ ಗೆ ನಿಜವಾಗಿಯೂ ಮಾನವೀಯತೆ ಇದ್ದರೆ ತಪ್ಪು ಮಾಡಿದ ಅಧಿಕಾರಿಯನ್ನು ಶಿಕ್ಷಿಸುವುದು ಬಿಟ್ಟು ಏನೂ ತಿಳಿಯದ ಅಡುಗೆಯವರ ಮೇಲೆ ಕ್ರಮ ಕೈಗೊಳ್ಳುತ್ತಾರೆ ಅಂದರೆ ಇವರ ವ್ಯಕ್ತಿತ್ವ ಏನು ಎಂದು ತಿಳಿಯುತ್ತಿದೆ. ಮೊನ್ನೆ ಸುದ್ದಿಮಾಧ್ಯಮಗಳಲ್ಲೂ ಬಿತ್ತರವಾದಾಗ ಹಾಸ್ಟೆಲ್ ವಿದ್ಯಾರ್ಥಿನಿಯರು ಹಾಸ್ಟೆಲ್ ವಾರ್ಡನ್ ನ ಮೇಲೆ ದೂರಿದ್ದಾರೆ ಹೊರತು ಅಡುಗೆಯವರ ಮೇಲೆ ಒಂದೂ ಮಾತು ಕೂಡ ಆಡಲಿಲ್ಲ ಆದರೂ ಈ ಅಧಿಕಾರಿ ಅಡುಗೆಯವರನ್ನು ಬದಲಾಯಿಸುತ್ತಿರುವ ಹಿಂದಿನ ಮರ್ಮವೇನು ಹಾಗಾದರೆ ಈ ವ್ಯಕ್ತಿ ಯಾವುದೋ ಆಮಿಷಕ್ಕೆ ಬಲಿಯಾದರಾ ಎನ್ನುವಂತಹ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಕಳೆದ 2 ಬಾರಿ ಹಾಸ್ಟೆಲ್ ವಾರ್ಡನ್ ಮಮತಾ ಮೇಲೆ ಕೆಲವು ಆರೋಪಗಳು ಬಂದಾಗ ಇದೇ ಕುಮಾರ್ ಇವರನ್ನು ಬಚಾವ್ ಮಾಡಿದ್ದರು ಹಾಗಾದರೆ ಭ್ರಷ್ಟ ಅಧಿಕಾರಿಗೆ ಬೆಂಗಾವಲಾಗಿ ನಿಂತಿದ್ದಾರೆ ಎನ್ನುವಂತಹ ಆರೋಪಗಳು ಇದೀಗ ಹೆಚ್ಚಾಗಿ ಕೇಳಿಬರುತ್ತಿದೆ.

ಸಾಗರದ ಶಾಸಕರಾಗಿರುವ ಹರತಾಳು ಹಾಲಪ್ಪನವರು ಇವೆಲ್ಲ ಅಂಶಗಳನ್ನು ಗಮನಿಸಲೇಬೇಕು ಅಮಾಯಕ ಅಡುಗೆಯವರ ಮೇಲೆ ಅಧಿಕಾರ ಚಲಾಯಿಸುತ್ತಿರುವ ಕುಮಾರಗೂ ಈ ದಂಧೆಯಲ್ಲಿ ಪಾಲಿತ್ತ ಎನ್ನುವುದರ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಬೇಕು.

ಅಮಾಯಕ ಅಡುಗೆಯವರಿಗೆ ಅನ್ಯಾಯವಾಗದಂತೆ ಮಾನ್ಯ ಶಾಸಕರು ಗಮನ ಹರಿಸಬೇಕು

Post a Comment

Previous Post Next Post