ಹೊಸನಗರ :ತಾಲೂಕಿನ ಮಾರುತಿಪುರ ಪಂಚಾಯತ್ ವ್ಯಾಪ್ತಿಯ ವಿಜಾಪುರದ ನೆಲಗಳಲೆಯಲ್ಲಿ ಸಂಜಯ ವಿದ್ಯಾ ಕೇಂದ್ರ(ರಿ ) ಜ್ಞಾನ ಸಾಗರ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಹಾಗೂ ರೋಟರಿ ಸಂಸ್ಥೆಯ ಸಹಭಾಗಿತ್ವದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ, ನೆಲೆಗಳಲ್ಲಿ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶ್ರೀ ರೋಗ ತಜ್ಞೆ ಡಾಕ್ಟರ್ ರಾಜನಂದಿನಿ ಕಾಗೋಡು ಅವರ ನೇತೃತ್ವದಲ್ಲಿ ನಡೆದಿದ್ದು, ಉದ್ಘಾಟನಾ ಕಾರ್ಯಕ್ರಮವನ್ನು ದೀಪ ಬೆಳಗುವುದರೊಂದಿಗೆಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಚಾಲನೆ ನೀಡಿದರು.ನಂತರ ಮಾತನಾಡಿದ ಕಾಗೋಡು ತಿಮ್ಮಪ್ಪ ರಾಜ್ಯವು ಸಾಂಕ್ರಾಮಿಕ ರೋಗ ಕೋವಿಡ್ ಮಹಾಮಾರಿಗೆ ನಲುಗಿದ್ದು ಇಂಥಹ ಪರಿಸ್ಥಿತಿಯಲ್ಲಿ ವೈದ್ಯರ ಸೇವೆಗಳನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ ಆರೋಗ್ಯ ಹಾಗೂ ಸ್ವಚ್ಛತೆ ಕಡೆಗೆ ಗಮನಹರಿಸುವಂತೆ ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಸುವರ್ಣ ಯೋಗೇಂದ್ರ, ನಾರಾಯಣಪ್ಪ ಹಾಗೂ ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಜಿ ನಾಗರಾಜ್, ಮುಖಂಡರಾದ ಸದಾಶಿವ ಶೆಟ್ಟಿ,ಏರಗಿ ಉಮೇಶ್, ಲಿಂಗರಾಜ್ ಮತ್ತಿತರು ಹಾಜರಿದ್ದರು.