ಹೊಸನಗರ :ಫೀಲ್ಡ್ ಗೆ ಇಳಿದು ಬ್ಯಾಟ್ ಬೀಸಿದ ಹಾಲಿ,ಮಾಜಿ ಶಾಸಕರು ..!!..

ಹೊಸನಗರ :ತಾಲೂಕಿನ ಕೆನರಾ ಬ್ಯಾಂಕ್  ಮುಖ್ಯ ರಸ್ತೆಯ ಕ್ರೀಡಾಂಗಣದಲ್ಲಿ ನೆಡೆಯುತ್ತಿರುವ ಎಂ ಜಿ ಬಾಯ್ಸ್ ವಿಥ್ ಹ್ಯಾಪನಿಂಗ್ ಇವರ ಸಂಯುಕ್ತ ಅಶ್ರಯದಲ್ಲಿ ದ್ವಿತೀಯ ವರ್ಷದ ಯಶಸ್ವೀ ಹೊನಲು ಬೆಳಕಿನ ಪಂದ್ಯಾವಳಿಯನ್ನ ಹೊಸನಗರ ತಾಲೂಕು ಮೂಲೆಗದ್ದೆ ಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು ಹಾಗೂ ಗರ್ತಿಕರೆ ನಿಟ್ಟೂರು ಮಠದ ಶ್ರೀ ರೇಣುಕಾನಂದ ಶ್ರೀಗಳು ಜೊತೆಯಾಗಿ ಉದ್ಘಾಟನೆ ಮಾಡಿದರು, ಕಾರ್ಯಕ್ರಮಕ್ಕೆ ವಿಶೇಷವಾಗಿ ಮಾಜಿ ಹಾಲಿ ಶಾಸಕರ ಸಮಾಗಮವೂ ಪಂದ್ಯಾವಳಿಗೆ ಮೆರುಗು ನೀಡಿದ್ದು ವಿಶೇಷವಾಗಿತ್ತು.ಹೊಸನಗರ ಸಾಗರ ಕ್ಷೇತ್ರ ಶಾಸಕರು ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು  ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ರಿಕೆಟ್ ಪ್ರೇಮಿಗಳಿಗೆ ಶುಭ ಹಾರೈಸಿದರು.

ಉದ್ಘಾಟನ ಕಾರ್ಯಕ್ರಮದಲ್ಲಿ ಸುರೇಶ್ ಸ್ವಾಮಿರಾವ್ , ಹಾಲಗದ್ದೆ ಉಮೇಶ್ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಗುಲಾಬಿ ಮರಿಯಪ್ಪ , ಉಪಾಧ್ಯಕ್ಷರಾದ ಸುಮತಿ ಪೂಜಾರಿ, ಕಾರ್ಯಕ್ರಮದ ರೂವಾರಿಗಳಾದ ಅಧ್ಯಕ್ಷ ರಮಿತ್ ಪೂಜಾರಿ ಹಾಗೂ ಉಪಾಧ್ಯಕ್ಷರಾದ ಸಚಿನ್ ಮಾರಿಗುಡ್ಡ ಇವರು ನೆರವೇರಿಸಿದರು.


ಈ ಸಂದರ್ಭದಲ್ಲಿ ಕಾರ್ಯಕ್ರಮದ ಮೂಲಬಿಂದು ಎಂಬಂತೆ ಸರ್ವ ಸದಸ್ಯರು ಕ್ರೀಡಾಭಿಮಾನಿಗಳು ಸಾರ್ವಜನಿಕರು ಮತ್ತು ಹಲವು ಗಣ್ಯರು ಹಾಜರಿದ್ದರು

Post a Comment

Previous Post Next Post