ಹೊಸನಗರ -ಸಾಗರ ರಾಜ್ಯಹೆದ್ದಾರಿ ಅವ್ಯವಸ್ಥೆ

ಹೊಸನಗರ -ಸಾಗರ ರಾಜ್ಯಹೆದ್ದಾರಿ  "ದುರಸ್ಥಿ" ಕಾರ್ಯದಲ್ಲಿನ ದುಸ್ಥಿತಿ!!!!

ಹೌದು,  ಸಾಗರ -ಹೊಸನಗರ ಮಾವಿನಹೊಳೆ ಮಾರ್ಗಮದ್ಯೆ ಮೂಲೆಗದ್ದೆ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ 200ಮೀಟರ್ ದೂರದಲ್ಲಿ ಕಿರು ಸೇತುವೆ ನವೀಕರಣ ಮಾಡಿದ ನಂತರ ಗುಂಡಿ ಮುಚ್ಚದೆ ಹಾಗೆ ಬಿಟ್ಟಿದ್ದು ದಿನ ನಿತ್ಯ ನೂರಾರು ಜನ ಓಡಾಡುವ ರಸ್ತೆ ಯಲ್ಲಿ ದಿನದಲ್ಲಿ ಮೂರ್ನಾಲ್ಕು ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ ದಯವಿಟ್ಟು ಸಂಬಂಧ ಪಟ್ಟ ಇಲಾಖೆ ಯವರು ಆದಷ್ಟು ಬೇಗ ಇತ್ತ ಗಮನ ಹರಿಸುವ ವರೇ ? 


ಅಧಿಕಾರಿಗಳ ಗಮನಕ್ಕೆ ಇನ್ನೂ ಬಾರದ ರಸ್ತೆಯ ಅವ್ಯವಸ್ಥೆ ಕಂಡು ನಿತ್ಯ ಓಡಾಟ ಮಾಡುವ ಸವಾರಿಗೆ ಕಿರಿ ಕಿರಿ ಆದಷ್ಟು ಬೇಗ ಅಗೆದ ಮೋರಿಯ ಗುಂಡಿ ಮುಚ್ಚುವಂತೆ ಸ್ಥಳೀಯ ಮಾರುತಿಪುರ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಗುಬ್ಬಿಗ ಅವರು ಒತ್ತಾಯ ಮಾಡಿದ್ದಾರೆ 


Previous Post Next Post