2019-20 ಸಾಲಿನ ಕುವೆಂಪು ವಿಶ್ವವಿದ್ಯಾನಿಲಯ ಅಂತಿಮ ಬಿ ಎ ಪದವಿ ಪರೀಕ್ಷೆಯಲ್ಲಿ ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಗ್ರಾಮೀಣ ವಿದ್ಯಾರ್ಥಿನಿಯರ ಸಾಧನೆ...

ಹೊಸನಗರ :2019- 20 ಸಾಲಿನಲ್ಲಿ ಬಿಡುಗಡೆಯಾದ ಕುವೆಂಪು ವಿಶ್ವವಿದ್ಯಾನಿಲಯ ಬಿಎ ಪದವಿ ಅಂತಿಮ ಪರೀಕ್ಷೆಯಲ್ಲಿ ಕೊಡಚಾದ್ರಿಸರ್ಕಾರಿ ಪ್ರಥಮದರ್ಜೆ ಕಾಲೇಜಿನ 

ಕುಮಾರಿ ಅನುಷ ಎ ಜಿ 2ನೇ rank 

ಕುಮಾರಿ ರಂಜನಿ ಎಚ್ ಜಿ 9 ನೇ rank ಪಡೆದಿರುತ್ತಾರೆ 

ಮೂಲತಃ ರಂಜನಿ ಅವ್ರು  ಯಬಗೋಡು. ಬ್ರಾಹ್ಮಣವಾಡ ಗ್ರಾಮ ನಗರ ಅಂಚೆ. ಹೊಸನಗರ ತಾಲ್ಲೂಕಿನವರಾಗಿದ್ದು ತಂದೆ ಗುರುಮೂರ್ತಿ ತಾಯಿ ರಾಜೇಶ್ವರಿ ದಂಪತಿಗಳ ಪುತ್ರಿಯಾಗಿದ್ದು ಮೂಲತಃ ಕೃಷಿ ಕುಟುಂಬ ಹಿನ್ನೆಲೆಯಿಂದ ಬಂದ ಗ್ರಾಮೀಣ ಪ್ರತಿಭೆ ಸದ್ಯ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ MSW ಪದವಿ ಪಡೆಯುತ್ತ ಇರುವರು 


ಮೂಲತಃ ಅನುಷಾ ಅವರು ತೀರ್ಥಹಳ್ಳಿ ತಾಲೂಕು ಶಿರಿಗಾರು ಗ್ರಾಮ ಅಗ್ರಹಾರ ಹೋಬಳಿಯ ಅರಳಸುರಳಿ (ಇಂದಿರಾನಗರ ) ವಾಸಿ ಶ್ರೀ ಗುಡ್ಡಪ್ಪ ಮಾತು ಲಲಿತ ದಂಪತಿಗಳ ಪುತ್ರಿ  ಮೂಲತಃ ಕೂಲಿ ಕೆಲಸ ಮಾಡುವ ಕುಟುಂಬದ ಹಿನ್ನೆಲೆಯ  ಅನುಷಾ ಎ ಜಿ ಅಣ್ಣಾ ಅಭಿಷೇಕ ಪ್ರೇರಣೆ ಓದಿನಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದ್ದಿದ್ದಾರೆ


ಇಬ್ಬರು ವಿದ್ಯಾರ್ಥಿಗಳಿಗೂ ಕಾಲೇಜು ಆಡಳಿತ ಮಂಡಳಿ,ಹಾಗೂ ಪ್ರಾಚಾರ್ಯರು  ಶ್ರೀ ದಿವಾಕರ್, ಕನ್ನಡ ವಿಭಾಗದ ಮುಖ್ಯಸ್ಥರು ಶ್ರೀಮತಿ ಸೌಮ್ಯ, ಕನ್ನಡ ವಿಭಾಗದ ಉಪಾಸ್ಯಕರು ಕಾಲೇಜಿನ ಪರವಾಗಿ  ಅಭಿನಂದನೆಗಳನ್ನ ಸಲ್ಲಿಸಿದ್ದಾರೆ

Post a Comment

Previous Post Next Post