ಹೊಸನಗರ :ತಾಲೂಕು ಹುಂಚ ಗ್ರಾಮಪಂಚಾಯತ್ ವ್ಯಾಪ್ತಿಯ ನಾಗರಹಳ್ಳಿ ಸಮೀಪ ಹಡ್ಲುಬೈಲು ಊರಿನ ಯುವಕ ಉಮೇಶ್(26) ತೀವ್ರ ಅನಾರೋಗ್ಯ ಸಮಸ್ಯೆಯಿಂದ ಉಡುಪಿಯ ಮಣಿಪಾಲ ಕೆಎಂಸಿ ಹಾಸ್ಪಿಟಲ್ ನಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೂಲತ ಉಮೇಶ್ ಹಡ್ಲುಬೈಲ್ ಶಂಕರಪ್ಪ ಅವರ ಒಬ್ಬನೇ ಮಗನಾಗಿದ್ದು.ಕೃಷಿ ಕೂಲಿ ಕಾರ್ಮಿಕನಾಗಿದ್ದ ಜೊತೆಗೆ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿ ತನ್ನನ್ನ ಗುರುತಿಸಿಕೊಂಡಿದ್ದನು ಕಳೆದೊಂದು ವರ್ಷದ ಹಿಂದೆ ತೀವ್ರ ಕಿಡ್ನಿ ಹಾಗೂ ಲಿವರ್ ಸಮಸ್ಯೆಗಳಿಂದ ಬಳಲುತ್ತಿದ್ದ ಉಮೇಶನ ಸಂಕಷ್ಟ ಪರಿಸ್ಥಿತಿ ಕ್ಷೇತ್ರದ ಶಾಸಕರು,ಗೃಹ ಮಂತ್ರಿಗಳು ಆರಗ ಜ್ಞಾನೇಂದ್ರ ಅವರ ಗಮನಕ್ಕೂ ಬಂದಿದ್ದು ಅವರು ಸಹ ಚಿಕೆತ್ಸೆಗೆ ಸಹಕಾರ ನೀಡಿದ್ದರು ಇಂದು ಉಮೇಶನ ಸಾವಿನ ಸುದ್ದಿ ಕೇಳಿ ಸಂತಾಪವನ್ನ ಸೂಚಿಸಿ, ಮನೆಗೆ ಆದರವಾಗಬೇಕಿದ್ದ ಮಗ ಅಕಾಲಿಕ ಮರಣದ ನೋವಿನ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಉಮೇಶ್ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳಿದರು. ಅಗಲಿದ ಮಿತ್ರನ ಆತ್ಮಕ್ಕೆ ಭಾಜಪ ಯುವ ಮೋರ್ಚಾ ಮುಖಂಡರು ಅಭಿಷೇಕ್ ಹುಂಚ ಸಂತಾಪವನ್ನ ಸೂಚಿಸಿದರು.
ಉಮೇಶ್ ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧು ಮಿತ್ರರನ್ನ ಅಗಲಿದ್ದಾರೆ.