ರಿಪ್ಪನ್ ಪೇಟೆ : ತೆರೆದ ಬಾವಿಗೆ ಕಾಲು ಜಾರಿ ಬಿದ್ದು ಯುವಕನ ಧಾರುಣ ಸಾವು..!...


.ರಿಪ್ಪನ್ ಪೇಟೆ :ಹೊಸನಗರ ತಾಲೂಕು ರಿಪ್ಪನ ಪೇಟೆಯಾ ಸಮೀಪ ಮನೆಯ ಹಿಂಬದಿ ಇರುವ ತೆರೆದ ಬಾವಿಗೆ ಸೋಮವಾರ ರಾತ್ರಿ  ಕಾಲು ಜಾರಿ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. 

ರಿಪ್ಪನ್ ಪೇಟೆಯ ವಿನಾಯಕ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಆಂಜನೇಯ (ಅಂಜಿ) (25) ಮನೆಯ ಹಿಂಬದಿಯಲ್ಲಿ ತೆರಳುವಾಗ ಈ ಘಟನೆ ನಡೆದಿದೆ.

 ರಾತ್ರಿ 10.30 ರ ವೇಳೆ ಮನೆಯ ಕಾಂಪೌಂಡಿನ ಒಳಗಡೆ ಇದ್ದ ತೆರೆದ ಬಾವಿಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಈ ತೆರೆದ ಬಾವಿಗೆ ಬಿದ್ದ ಪರಿಣಾಮ ತಲೆಗೆ ಭೀಕರ ಪೆಟ್ಟಾಗಿದ್ದು ಸ್ಥಳದಲ್ಲೆ ಮೃತ ಪಟ್ಟಿದ್ದಾರೆ.

ಮನೆಯ ಮಾಲೀಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾಂಪೌಂಡಿನ ಒಳಗಡೆಯ ತೆರೆದ ಬಾವಿ ಇದ್ದರೂ ಅದನ್ನು ಮುಚ್ಚುವ ಗೋಜಿಗೆ ಹೋಗದೆ ಇದ್ದಿದ್ದರಿಂದ ಅಮಾಯಕ ಯುವಕ ಬಲಿಯಾಗಿದ್ದಾನೆ ಎಂದು ತಿಳಿದು ಬಂದಿದೆ 

ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Post a Comment

Previous Post Next Post