ಶಿವಮೊಗ್ಗ :ಪಂಡಿತ ದೀನ ದಯಾಳ್ ಉಪಾಧ್ಯಯರ ಜಯಂತಿಯ ಕಾರ್ಯಕ್ರಮ ಹಾಗೂ ದೀನ್ ದಯಾಳ್ ಕುರಿತ ಕಿರುಪುಸ್ತಕಗಳ ಹಂಚಿಕೆ...

ಹೊಸನಗರ :  ಪಂಡಿತ ದೀನದಯಾಳ್ ಉಪಾಧ್ಯಾಯರ 105ನೇ ಜನ್ಮದಿನದ ಆಚರಣೆ ಪ್ರಯುಕ್ತ, ಇಂದು  R T ಗೋಪಾಲ್ ಮತ್ತು ಹಿರಣತಿ ಶಿವಾನಂದ ನೇತೃತ್ವದಲ್ಲಿ ಹುಂಚಾ ಮತ್ತು ರಿಪ್ಪನಪೇಟೆ ಹೋಬಳಿ  ಭಾಗದ  ಭಾಜಪ ಬೂತ್ ಅಧ್ಯಕ್ಷರು ಹಾಗೂ ಕಾರ್ಯಕರ್ತರ ಮನೆಗೆ ಭೇಟಿ ನೀಡಿ ಪಂಡಿತ ದೀನದಯಾಳ್ ಉಪಧ್ಯಾಯರ ಜಯಂತಿ ಪೂರ್ವತಯಾರಿ ಅಂಗವಾಗಿ ಅಧ್ಯಕ್ಷರಿಗೆ ಮತ್ತು ಕಾರ್ಯಕರ್ತರಿಗೆ ಪಂಡಿತ ದೀನದಯಾಳ್ ಉಪಾಧ್ಯಾಯರ ಭಾವಚಿತ್ರ ಮತ್ತು ಹಾಡಿನ ಪ್ರತಿ ನೀಡುವ ಜೊತೆಗೆ ಅವರ ಪರಿಚಯ ಇರುವ ಕಿರು ಪುಸ್ತಕಗಳನ್ನು ಮತ್ತು ಪ್ರತಿಜ್ಞಾ ವಿಧಿ ನೀಡಿ ಕಾರ್ಯಕರ್ತರಲ್ಲಿ ಪಂಡಿತ ದೀನ ದಯಾಳ್ ಉಪಾಧ್ಯಾಯರ ಹೋರಾಟ ಹಾಗೂ ದೇಶ ಪ್ರೇಮದ ಕಿಚ್ಚುನ್ನು ತುಂಬಿದರು. ಹಾಗೂ ಮುಂದಿನ ದಿನಗಳಲ್ಲಿ ಯಾವ ರೀತಿ ಪಕ್ಷ ಸಂಘಟನೆ ಅವಶ್ಯಕತೆ ಇದೆ ಎಂಬುದರ ಬಗ್ಗೆ ಚರ್ಚಿಸಿ ಪಂಡಿತ ದೀನ ದಯಾಳ್ ಹಾಕಿಕೊಟ್ಟ ಮಾರ್ಗದಲ್ಲಿ ನೆಡೆದು,ಅವರ ಆಶೋತ್ತರಗಳನ್ನ ಪಕ್ಷ ಸಂಘಟನೆಯಲ್ಲಿ ತೊಡಗಿಸಿ, ಉಪಾಧ್ಯಯರ ಜಯಂತಿ ಆಚರಣೆಯಿಂದ ಕಾರ್ಯಕರ್ತರಿಗೆ ಹೊಸಚೈತನ್ಯ ಮೂಡುವುದು ಎಂದು, ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯರಾದ R T ಗೋಪಾಲ್, ಶಿವಾನಂದ ಹಿರೇಮಣತಿ, N ಸುರೇಶ್, ನಾಗೇಂದ್ರಪ್ಪ ಗೌಡರು, ವಿನಾಯಕ ಕಲ್ಲೂರು, N B ಮಂಜು, N ಸತೀಶ್, ಮತ್ತು ಎಲ್ಲ ಪಂಚಾಯಿತಿ ಸಂಚಾಲಕರು ಕಾರ್ಯಕರ್ತರು ಭಾಗವಹಿಸಿದ್ದರು

Post a Comment

Previous Post Next Post