ಶಿವಮೊಗ್ಗ:ದೇಶದ 75ನೇಸ್ವತಂತ್ರದಿನದ ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾದಿಂದ ಬೃಹತ್ ಸೈಕಲ್ ಜಾತಾ..

ಶಿವಮೊಗ್ಗ: ದೇಶದ 75ನೇಸ್ವತಂತ್ರದಿನದ ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ಜನತಾ ಪಾರ್ಟಿಯುವ ಮೋರ್ಚಾ, ಶಿವಮೊಗ್ಗ ಜಿಲ್ಲಾ ಘಟಕ ಬೃಹತ್ ಸೈಕಲ್ ಜಾತಾ ಕಾರ್ಯಕ್ರಮ "ಆಜಾದಿ ಕಾ ಅಮೃತಮಹೋತ್ಸವ" ವನ್ನ ಹಮ್ಮಿಕೊಳ್ಳಲಾಗಿದೆ

 ಕರ್ನಾಟಕ ಸ್ವಂತತ್ರ ಸಂಗ್ರಾಮಕ್ಕೆ ಮುನ್ನುಡಿ ಇಟ್ಟಂತೆ, ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಪುಟ್ಟ ಗ್ರಾಮ ಈಸೂರು ಸ್ವತಂತ್ರ ಹೋರಾಟಗಾರರ ಸ್ಥೈರ್ಯ ಧೈರ್ಯ, ತ್ಯಾಗಬಲಿದಾನವೂ ನಾಡಿಗೆ ಸ್ಫೂರ್ತಿನೀಡಿದೆ. ಕರ್ನಾಟಕದಲ್ಲೇ ಮೊಟ್ಟಮೊದಲ ಬಾರಿ ಬ್ರಿಟಿಷ್ ನೀತಿಗಳನ್ನ ದಿಕ್ಕರಿಸಿ,  ಸಂಪೂರ್ಣ ಸ್ವಂತತ್ರ ಗ್ರಾಮ ಎಂದು ಘೋಷಣೆ ಮಾಡಿಕೊಂಡ ದಿಟ್ಟ ಪುಣ್ಯಭೂಮಿ "ಈಸೂರು"

ಸೂರು ಕೊಟ್ಟರೂ ಈಸೂರು ಕೊಡೆವು  "ಎಂಬ ಘೋಷಣೆ ಮಾಡಿದ ಗ್ರಾಮಸ್ಥರ ನೆಡೆ ಇಡೀ ರಾಜ್ಯ ತಿರುಗಿ ನೋಡುವಂತೆ ಮಾಡಿತ್ತು.

ಕರ್ನಾಟಕ ಸ್ವತಂತ್ರ ಸಂಗ್ರಾಮದ ಹೆಮ್ಮೆಯ ಪ್ರತೀಕವಾದ,ಈಸೂರು ದಂಗೆ ಸವಿ ನೆನಪಿಗಾಗಿ BJYM ಶಿವಮೊಗ್ಗ ಘಟಕ ದಿನಾಂಕ 26-09-2021 ರಂದು ಆಯನೂರು ನಿಂದ 8ಗಂಟೆಗೆ ಹಾಗೂ ಶಿಕಾರಿಪುರದಿಂದ 11:30 ಕ್ಕೆ ಬೃಹತ್ ಸೈಕಲ್ ಜಾತಾವನ್ನ,ಹಮ್ಮಿಕೊಂಡಿದ್ದು ಆಯನೂರು ಕುಂಸಿ ಮಾರ್ಗವಾಗಿ ಈಸೂರು, ತಲುಪಿ ಸಭಾ ಕಾರ್ಯಕ್ರಮವನ್ನ ಆಯೋಜನೆ ಮಾಡಿದೆ.





Post a Comment

Previous Post Next Post