ಸಾಗರ ತಾಲ್ಲೂಕಿನಲ್ಲಿ ಅತಿಯಾದ ಗಾಳಿ ಮಳೆ ಲಕ್ಷಾಂತರ ರೂ ಬೆಳೆ ನಷ್ಟ ಸಂಕಷ್ಟದಲ್ಲಿ ರೈತರು...


ಸಾಗರ ತಾಲ್ಲೂಕಿನಲ್ಲಿ ಅತಿಯಾದ ಗಾಳಿ ಮಳೆ ಲಕ್ಷಾಂತರ ರೂ ಬೆಳೆ ನಷ್ಟ ಸಂಕಷ್ಟದಲ್ಲಿ ರೈತರು.


ಶಿವಮೊಗ್ಗ ಜಿಲ್ಲೆಯಲ್ಲಿ ನಿನ್ನೆಯಿಂದ ಅತಿಯಾಗಿ ಗಾಳಿಮಳೆ ಬೀಸುತ್ತಿದ್ದು ಇದರ ಪರಿಣಾಮ ಇದೀಗ ರೈತರನ್ನು ಸಹ ಈ ಮಳೆ ದಿಗಿಲೆಬ್ಬಿಸುತ್ತಿದೆ.



ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎನ್ನುವಂತಹ ಸ್ಥಿತಿಗೆ ಇದೀಗ ಮಲೆನಾಡಿನ ರೈತರು ಬಂದಿದ್ದಾರೆ.

ಕಳೆದ 2ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಗಾಳಿ ಮಳೆಗೆ ಇದೀಗ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಗೌತಮಪುರ ಗ್ರಾಮದಲ್ಲಿ ಸರಿ ಸಮಾರು ರೈತರ ಜೋಳದ ಬೆಳೆ ಈಗ ಸಂಪೂರ್ಣವಾಗಿ ಗಾಳಿಗೆ ಬಿದ್ದಿದ್ದು ಇದೀಗ ಲಕ್ಷಾಂತರ ರೂ ನಷ್ಟ ಅನುಭವಿಸುವಂತಾಗಿದೆ.


ಗೌತಮಪುರ ಗ್ರಾಮದ ಹಿರಿಯಪ್ಪ ಎಂಬುವವರ 4.20 ಎಕರೆ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಗಾಳಿಗೆ ಬಿದ್ದಿದ್ದು 2ಲಕ್ಷ ರೂ ನಷ್ಟವಾಗಿದೆ.

ಇದೇ ರೀತಿ ಸುತ್ತಮುತ್ತಲಿನ ಗ್ರಾಮದ ಮೆಕ್ಕೆಜೋಳ ಗಾಳಿಗೆ ಧರೆಗುಳಿದಿದ್ದು ರೈತರಿಗೆ ನಷ್ಟ ಉಂಟಾಗಿದೆ.







ವರದಿ: ಪವನ್ ಕುಮಾರ್ ಕಠಾರೆ.

Post a Comment

Previous Post Next Post